ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ 
ರಾಜ್ಯ

ವಂಚನೆ ಪ್ರಕರಣ: ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಬಂಧನ

ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂ ಹಣ ಬರುತ್ತದೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆರೋಪದಡಿ ಕಂಪನಿ‌ ನಿರ್ದೇಶಕ ಓರ್ವನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಅರ್ಧಗಂಟೆ ಜಾಹಿರಾತು ನೋಡಿದರೆ ದಿನಕ್ಕೆ 240 ರೂ ಹಣ ಬರುತ್ತದೆ ಎಂದು ಆನ್​ಲೈನ್​ನಲ್ಲಿ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಆರೋಪದಡಿ ಕಂಪನಿ‌ ನಿರ್ದೇಶಕ ಓರ್ವನನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜೆಎಎ ಲೈಫ್‌ಸ್ಟೈಲ್ ಇಂಡಿಯಾ ಕಂಪನಿ‌ ನಿರ್ದೇಶಕ ಕೆ.ವಿ. ಜಾನಿ ಬಂಧಿತ ಆರೋಪಿ.

ಬಂಧಿತ ಆರೋಪಿ, ಬಸವೇಶ್ವರನಗರದಲ್ಲಿ ಕಚೇರಿ ಹೊಂದಿದ್ದು, ಸಾರ್ವಜನಿಕರಿಗೆ ಸದಸ್ಯತ್ವ ನೀಡಿ, ಬೇರೆಯವರನ್ನೂ ಚೈನ್ ಲಿಂಕ್ ರೀತಿಯಲ್ಲಿ ಸದಸ್ಯರನ್ನಾಗಿ ಮಾಡಿದರೆ ಕಮಿಷನ್ ನೀಡುವುದಾಗಿಯೂ ಹೇಳುತ್ತಿದ್ದನು. ಜೆಎಎ ಲೈಫ್ ಸ್ಟೈಲ್ ಹೆಸರಿನ ಜಾಲತಾಣದ ಮೂಲಕ ಆರೋಪಿ‌ ವಹಿವಾಟು ನಡೆಸುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಮೊದಲು ಕಂಪನಿ ಸದಸ್ಯತ್ವಕ್ಕೆಂದು 1,109 ರೂ ಪಡೆಯುತ್ತಿದ್ದ. ಕೇವಲ ಅರ್ಧ ಗಂಟೆ ಜಾಹೀರಾತು ನೋಡಿದರೆ, ದಿನಕ್ಕೆ 240 ರೂ ಸಿಗುತ್ತದೆ. ಇದೇ ರೀತಿ ದಿನಾಲೂ ತಾವು ಜಾಹೀರಾತು ವಿಡಿಯೊ ನೋಡಿದರೆ, ಪ್ರತಿ ತಿಂಗಳು 7,20 0ರಿಂದ 86,400ರವರೆಗೂ ಹಣ ಸಂಪಾದಿಸಹುದು. ಅದೇ ರೀತಿ ಒಬ್ಬ ಸದಸ್ಯ 10 ಜನರನ್ನು ಸದ್ಯಸ್ಯರನ್ನಾಗಿ ಸೇರಿಸಬೇಕು ಎಂದು ಮೋಸ ಮಾಡುತ್ತಿದ್ದ. ಇನ್ನು ಒಬ್ಬರನ್ನು ಸದ್ಯಸರನ್ನಾಗಿ ಮಾಡಿಸಿದರೆ 4400 ರೂ. ಲಾಭ ಸಿಗುತ್ತದೆ. 1 ಲಕ್ಷ ಸದಸ್ಯರನ್ನಾಗಿ ಮಾಡಿದರೆ 356 ಕೋಟಿ ಹಣ ಗಳಿಸಬಹುದು ಎಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮುಖಾಂತರ ವಂಚಿಸುತ್ತಿದ್ದ. ಹಣವೂ ಆನ್‌ಲೈನ್ ಮೂಲಕವೇ ಖಾತೆಗೆ ಜಮೆ ಆಗುವುದಾಗಿ ಹೇಳುತ್ತಿದ್ದ. ಆತನ ಮಾತು ನಂಬಿ ಸುಮಾರು 4 ಲಕ್ಷ ಮಂದಿ ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಆರೋಪಿ ಸದಸ್ಯರಿಗೆ ಯಾವುದೇ ಹಣ ನೀಡರಲಿಲ್ಲ. ಅಲ್ಲದೇ, ಈ ಕುರಿತು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ನೊಂದ ಸದಸ್ಯರು ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹೂಮಳೆ ಸುರಿಸಿ ಸ್ವಾಗತ ಕೋರಿದ ಜನತೆ..!

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ಕೊಟ್ಟ ಮಾತಿನ ಕದನ: ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಹಗ್ಗದ ಮೇಲಿನ ನಡಿಗೆ! (ನೇರ ನೋಟ)

ಬೆಳಗಾವಿ: ಖಾನಾಪುರದಲ್ಲಿ ತಹಶಿಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಚ್ಚಾಟ!

SCROLL FOR NEXT