ಸಂಗ್ರಹ ಚಿತ್ರ 
ರಾಜ್ಯ

ಚಾಮರಾಜನಗರ ಆಕ್ಸಿಜನ್ ದುರಂತ: ವಿಚಾರಣಾ ಆಯೋಗ ಕಚೇರಿ ಮೈಸೂರಲ್ಲಿ ಸ್ಥಾಪನೆಯಿಂದ ದೂರು ಸಲ್ಲಿಸಲು ಸಮಸ್ಯೆ!

ಆಕ್ಸಿಜನ್ ದುರಂತ ಪ್ರಕಱಣ ಘಟನೆ ನಡೆದಿದ್ದು ಚಾಮರಾಜನಗರದಲ್ಲಿ. ಆದರೆ, ನ್ಯಾಯಾಂಗ ವಿಚಾರಣಾ ಆಯೋಗ ಕಚೇರಿಯನ್ನು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಹೊಸ ಕಟ್ಟದಲ್ಲಿ ಕಚೇರಿ ತೆರೆಯಲಾಗಿದ್ದು, ಇದು ಮೃತರ ಸಂಬಂಧಿಕರು ಹಾಗೂ ನೊಂದವರು ದೂರು ಸಲ್ಲಿಸಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. 

ಚಾಮರಾಜನಗರ: ಆಕ್ಸಿಜನ್ ದುರಂತ ಪ್ರಕಱಣ ಘಟನೆ ನಡೆದಿದ್ದು ಚಾಮರಾಜನಗರದಲ್ಲಿ. ಆದರೆ, ನ್ಯಾಯಾಂಗ ವಿಚಾರಣಾ ಆಯೋಗ ಕಚೇರಿಯನ್ನು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಹೊಸ ಕಟ್ಟದಲ್ಲಿ ಕಚೇರಿ ತೆರೆಯಲಾಗಿದ್ದು, ಇದು ಮೃತರ ಸಂಬಂಧಿಕರು ಹಾಗೂ ನೊಂದವರು ದೂರು ಸಲ್ಲಿಸಲು ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. 

ಮೇ.2 ರಂದು ಸಂಭವಿಸಿದ ಆಕ್ಸಿಜನ್ ದುರಂತ ಘಟನೆಯಲ್ಲಿ 24 ಮಂದಿ ಮೃತಪಟ್ಟಿದ್ದರು. ನ್ಯಾಯಾಂಗ ತನಿಖೆಗ ಆದೇಶಿಸಿ, ನಿವೃತ್ತ ನ್ಯಾ.ಬಿ.ಎ ಪಾಟೀಲರನ್ನು ನೇಮಿಸಿರುವ ಸರ್ಕಾರ, ಇದೀಗ ನ್ಯಾಯಾಂಗ ವಿಚಾರಣಾ ಆಯೋಗದ ಕಚೇರಿಯಲ್ಲಿ ಮೈಸೂರಿನ ಜಲದರ್ಶನಿಯಲ್ಲಿ ತೆರೆದಿದೆ. 

ಮೃತರ ವಾರಸುದಾರರು ಘಟನೆ ಬಗ್ಗೆ ತಿಳಿದಿರುವವರು ದೂರು ಸಲ್ಲಿಸಲು ಆಯೋಗದ ಪ್ರಕಟಣೆ ಹೊರಡಿಸಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಅಂತರ್ ಜಿಲ್ಲೆಗೆ ಪ್ರವೇಶ ಇಲ್ಲ, ಬಸ್ ಇಲ್ಲ, ಟ್ರೈನ್ ಇಲ್ಲ, ಮೃತರ ಸಂಬಂಧಿಕರು, ನೊಂದವರು ದೂರು ಸಲ್ಲಿಸಲು ದೂರದ ಮೈಸೂರಿಗೆ ಹೋಗುವುದಾದರೂ ಹೇಗೆ ಎಂಬ ಸಮಸ್ಯೆ ಉದ್ಭವವಾಗಿದೆ. 

ನನ್ನ ಸಹೋದರಿ ಹಾಗೂ ಮಕ್ಕಳನ್ನು ಮೈಸೂರಿನಲ್ಲಿರುವ ಕಚೇರಿಗೆ ಹೇಗೆ ಕರೆದುಕೊಂಡು ಹೋಗಲಿ. ಎರಡು ಹೊತ್ತಿನ ಊಟಕ್ಕೇ ಸಂಕಷ್ಟಪಡುತ್ತಿದ್ದೇವೆಂದು ನಲ್ಲರಾಜ ನಾಯಕ ಎಂಬವವರು ಹೇಳಿದ್ದಾರೆ. 

ದುರಂತದಲ್ಲಿ ಮೃತಪಟ್ಟ ಮತ್ತೊಬ್ಬ ವ್ಯಕ್ತಿಯ ಸಂಬಂಧಿಕ ಮಹೇಶ್ ಎಂಬುವವರು ಮಾತನಾಡಿ, ಇಬ್ಬರು ಸಣ್ಣ ಮಕ್ಕಳು, ವಯಸ್ಸಾದ ಅತ್ತೆ ಮಾವರನ್ನು ಹೇಗೆ ಕರೆದುಕೊಂಡು ಹೋಗಲಿ. ಪರಿಹಾರಕ್ಕಾಗಿ ಜನಪ್ರತಿನಿಧಿಗಳ ಮನೆಮನೆಗೆ ತೆರಳಿ ಮನವಿ ಮಾಡಿಕೊಂಡಿದ್ದೇವೆ. ಸಾವಿನಲ್ಲೂ ತಾರತಮ್ಯವನ್ನೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಈ ನಡುವೆ ಕೆಪಿಸಿಸಿ ಕಾರ್ಯಾಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರು ಮಾತನಾಡಿ, ಸರ್ಕಾರ ಕೂಡಲೇ ಕಚೇರಿಯನ್ನು ಚಾಮರಾಜನಗರಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT