ರಾಜ್ಯ

ಕೊರೋನಾ ನಿಯಮ ಗಾಳಿಗೆ ತೂರಿ ಜನರಿಗೆ ತರಕಾರಿ, ಕೋಳಿ ವಿತರಿಸಿದ ಕಾಂಗ್ರೆಸ್ ನಾಯಕ ವಿಜಯ್ ಕುಮಾರ್

Manjula VN

ಬೆಂಗಳೂರು: ರಾಜಾಜಿನಗರದ ಶಿವಗರದಲ್ಲಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್ ನಾಯಕ ವಿಜಯ್ ಕುಮಾರ್ ಹಾಗೂ ಅವರ ಪತ್ನಿ ಮಂಜುಳಾ ವಿಜಯ್ ಕುಮಾರ್ ಅವರು, ಜನರಿಗೆ ಅಗತ್ಯ ವಸ್ತುಗಳು, ತರಕಾರಿ ಹಾಗೂ ಕೋಳಿ ವಿತರಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರ ಮಾರ್ಗಸೂಚಿಯಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದೂವರೆ ತಿಂಗಳಿನಿಂದ ಬಡವರಿಗೆ ಉಪಹಾರ, ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಅಗತ್ಯ ಇರುವವರಿಗೆ 15-18 ಕೆಜಿ ತರಕಾರಿಗಳನ್ನು ವಿತರಿಸಲಾಗಿದೆ. ಪ್ಯಾಕೇಜ್ ನಲ್ಲಿ ಕೋಳಿಯನ್ನು ಸೇರ್ಪಡೆಗೊಳಿಸಿರಲಿಲ್ಲ. ಆದರೆ, ಕೋಳಿ ಫಾರ್ಮ್ ನಡೆಸುತ್ತಿದ್ದ ಕೆಲ ಯುವಕರು ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಸಹಾಯ ಮಾಡುವ ಸಲುವಾಗಿ 1.2 ಟನ್ ಕೋಳಿಗಳನ್ನು ಖರೀದಿ ಮಾಡಿದ್ದೆವು. ಇದರಲ್ಲಿ 600 ಕೋಳಿಗಳನ್ನು ವಿತರಣೆ ಮಾಡಲಾಗಿದೆ ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ. 

ಕೋಳಿ ವಿತರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವಂತಾಗಿತ್ತು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ. 

ಜನರು ಮಾಸ್ಕ್ ಗಳನ್ನು ಧರಿಸಿದ್ದರು. ಕೋಳಿ ವಿತರಿಸುತ್ತಿರುವ ಕುರಿತು ನಾವು ಜನರು ಜನರಿಗೆ ಯಾವುದೇ ಮಾಹಿತಿಗಳನ್ನೂ ನೀಡಿರಲಿಲ್ಲ ಎಂದು ವಿಜಯ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT