ಬಾಂಧವ್ಯ ಹಾಗೂ ಆಕೆಯ ತಂದೆ ರಾಜಣ್ಣ 
ರಾಜ್ಯ

ಅಪ್ಪಂದಿರ ದಿನವೇ ಮಂಡ್ಯದಲ್ಲಿ ದುರಂತ: ಮಗಳ ಆತ್ಮಹತ್ಯೆಯಿಂದ ನೊಂದ ತಂದೆಗೆ ಹೃದಯಾಘಾತ

ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಂಡ್ಯ: ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾ,ಮದಲ್ಲಿ ಸಂಭವಿಸಿದ ಘಟನೆಯಲ್ಲಿ ಬಾಂಧವ್ಯ (17) ನೇಣಿಗೆ ಶರಣಾಗಿದ್ದರೆ ಆಕೆಯ ತಂದೆ ರಾಜಣ್ಣ  (65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಾಂಧವ್ಯ ತಾನು ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆ ಜತೆ ಜಗಳವಾಡಿದ್ದಾಳೆ. ಆ ನಂತರ ಭಾನುವಾರ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ದೃಶ್ಯ ನೋಡಿದ ರಾಜಣ್ಣನವರಿಗೆ ಹೃದಯಾಘಾತವಾಗಿದೆ.

ಮಗಳ ಅಂತಿಮ ಸಂಸ್ಕಾರದ ವೇಳೆ ರಾಜಣ್ಣನವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಚಿಕ್ಕ ವಿಷಯಕ್ಕೆ ಒಂದೇ ದಿನ ಎರಡು ಜೀವ ಬಲಿಯಾಗಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT