ಬಿಬಿಎಂಪಿ 
ರಾಜ್ಯ

ಸೋಂಕಿತರ ಬೆಡ್ ಬುಕ್ಕಿಂಗ್ ಗೆ ಬಿಯು ನಂಬರ್ ಪದ್ಧತಿ ಕೈ ಬಿಟ್ಟ ಬಿಬಿಎಂಪಿ

ಸೋಂಕಿತರ ಬೆಡ್ ಬುಕ್ಕಿಂಗ್ ಗೆ ಬಿಯು ನಂಬರ್ ಪದ್ದತಿಯನ್ನು ಬಿಬಿಎಂಪಿ ಕೈಬಿಟ್ಟಿದೆ. ಸದ್ಯಕ್ಕೆ ನಗರದಲ್ಲಿರುವ ಬೆಡ್ ಗಳ ಪೈಕಿ ಮೂರನೇ ಅಲೆಗೆ ಶೇ. 15 ಬೆಡ್ ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. 

ಬೆಂಗಳೂರು: ಸೋಂಕಿತರ ಬೆಡ್ ಬುಕ್ಕಿಂಗ್ ಗೆ ಬಿಯು ನಂಬರ್ ಪದ್ದತಿಯನ್ನು ಬಿಬಿಎಂಪಿ ಕೈಬಿಟ್ಟಿದೆ. ಸದ್ಯಕ್ಕೆ ನಗರದಲ್ಲಿರುವ ಬೆಡ್ ಗಳ ಪೈಕಿ ಮೂರನೇ ಅಲೆಗೆ ಶೇ. 15 ಬೆಡ್ ಗಳನ್ನು ಹೆಚ್ಚಳ ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. 

ಇದಕ್ಕೆ ಪ್ರಮುಖ ಕಾರಣ ಬಿಯು ನಂಬರ್ ಸರಿಯಾದ ಸಮಯಕ್ಕೆ ಸೋಂಕಿತರಿಗೆ ಸಿಗದೆ ಇದ್ದಿದ್ದು. ಇದರ ಜೊತೆಗೆ ಬಿಯು ನಂಬರ್ ಬೇಕಾದರೆ ಹಣ ವಸೂಲಿ ಪ್ರಕರಣವೂ ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮೂರನೇ ಅಲೆಯಲ್ಲಿ ಆ ಸಮಸ್ಯೆ ಬಗೆ ಹರಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಮೂರನೇ ಅಲೆಯಲ್ಲಿ ಬಿಯು ನಂಬರ್ ಕಡ್ಡಾಯ ಅಲ್ಲ ಅಂತ ಪಾಲಿಕೆ ಸ್ಪಷ್ಟ ಪಡಿಸಿದೆ.

ಆದರೆ ಬಿಯು ನಂಬರ್ ಬದಲಿಗೆ ಮೂರನೇ ಅಲೆಯಲ್ಲಿ ಎಸ್ ಆರ್ ಎಫ್ ನಂಬರ್ ಮುಖ್ಯ. ಈ ಎಸ್ ಆರ್ ಎಫ್ ನಂಬರ್ ಕೊರೋನಾ ಪರೀಕ್ಷೆ ವರದಿಯ ಜೊತೆಗೆ ಸೋಂಕಿತರಿಗೆ ಸಿಗಲಿದೆ. ಈ ಮೂಲಕ ಬೆಡ್ ಬುಕ್ ಮಾಡಲು ಮೂರನೇ ಅಲೆಯಲ್ಲಿ ಪರದಾಟ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೂರನೇ ಅಲೆಯಲ್ಲಿ ಪಾಸಿಟಿವ್ ವರದಿ ಬಂದ ಒಂದು ತಾಸಿನ ಒಳಗಡೆ ಸೋಂಕಿತರನ್ನು ಸಂಪರ್ಕಸಲು ಬೇಕಾಗಿ ಪಾಲಿಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇದಕ್ಕಂತಲೇ ಕಂಟ್ರೋಲ್  ರೂಮಲ್ಲಿ ಸೂಪರ್ ಯೂಸರ್ ವಿಂಗ್ ಮಾಡಲು ಬಿಬಿಎಂಪಿ ಮುಂದಾಗಿದೆ. 

ತ್ವರಿತಗತಿಯಲ್ಲಿ ಸೋಂಕಿತರ ಸಂಪರ್ಕಿಸಲು ಕಂಟ್ರೋಲ್ ರೂಂನ ಈ ವಿಶೇಷ ಸೂಪರ್ ಯೂಸರ್ ತಂಡ ಇರಲಿದೆ. ಈ  ಸೂಪರ್ ಯೂಸರ್ ವ್ಯವಸ್ಥೆ ಮೂಲಕ ಒಂದು ತಾಸಿನ ಒಳಗಡೆಯೇ ಸೋಂಕಿತರ ಸಂಪರ್ಕಮಾಡಲಿದೆ ಪಾಲಿಕೆ. ಹೀಗೆ ಮಾಡುವುದರಿಂದ ಸೋಂಕಿತರು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಹುದು. ಆರಂಭದಲ್ಲೇ ಪ್ರತಿ ಸೋಂಕಿತರ ಸಂಪರ್ಕ ಸಾಧ್ಯವಾದರೆ ಸಾವು ನೋವು ತಡೆಗಟ್ಟಬಹುದು ಎಂಬ ಲೆಕ್ಕಾಚಾರ ಪಾಲಿಕೆಯದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT