ರಾಜ್ಯ

ಅನ್ ಲಾಕ್ 2.0: ಸದ್ಯಕ್ಕಿಲ್ಲ ಜೈವಿಕ ಉದ್ಯಾನಗಳ ದರ್ಶನ, ಸ್ಥಳೀಯ ಆಡಳಿತ ಮಂಡಳಿಗೆ ಅಂತಿಮ ನಿರ್ಣಯದ ಜವಾಬ್ದಾರಿ

Srinivasamurthy VN

ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಜೈವಿಕ ಉದ್ಯಾನವನಗಳು ಮತ್ತು ಮೃಗಾಲಯಗಳನ್ನು ತೆರೆಯುವ ಕುರಿತು ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಅನ್ ಲಾಕ್ 2.0 ಜಾರಿಯಾಲಿದ್ದು, ಹೊಸ ನಿಯಮಗಳ ಅಡಿಯಲ್ಲಿ ಕೆಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದರೂ, ಬಹುತೇಕ ಜೈವಿಕ ಉದ್ಯಾನಗಳು ಇನ್ನೂ ಮುಚ್ಚಲ್ಪಟ್ಟಿವೆ. ಪ್ರಮುಖವಾಗಿ ನಗರದ  ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರೆಯುವುದು ಸೇರಿದಂತೆ  ಪ್ರವಾಸೋದ್ಯಮ ಚಟುವಟಿಕೆಗಳು ಇನ್ನೂ ಪ್ರಾರಂಭವಾಗಬೇಕಿದೆ.

ಕರ್ನಾಟಕದ ಮೃಗಾಲಯ ಪ್ರಾಧಿಕಾರವು ವ್ಯವಸ್ಥಾಪಕರು ಮತ್ತು ಸ್ಥಳೀಯ ಆಡಳಿತಕ್ಕೆ ಮತ್ತೆ ತೆರೆಯುವ ನಿರ್ಧಾರವನ್ನು ಬಿಟ್ಟಿದ್ದರೂ ಸಹ, ಪಶುವೈದ್ಯರು, ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರವೇ ಮೃಗಾಲಯವನ್ನು ತೆರೆಯಲಾಗುವುದು ಎಂದು ಬಿಬಿಪಿ (ಬನ್ನೇರುಘಟ್ಟ  ಬಯಾಲಾಜಿಕಲ್ ಪಾರ್ಕ್) ಆಡಳಿತ ಮಂಡಳಿ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಅಧಿಕಾರಿಯೊಬ್ಬರು, 'ಬನ್ನೇರುಘಟ್ಟ ಹಳ್ಳಿಗಳಲ್ಲಿ ಮತ್ತು ಸುತ್ತಮುತ್ತ ಇನ್ನೂ ಅನೇಕ ಸಕಾರಾತ್ಮಕ ಪ್ರಕರಣಗಳಿವೆ. ಮೃಗಾಲಯವನ್ನು ತೆರೆಯುವಾಗ ಸ್ಥಳೀಯರ ಆರೋಗ್ಯವೂ ನಿರ್ಣಾಯಕವಾಗಿದೆ, ಏಕೆಂದರೆ ಅನೇಕ ಸಿಬ್ಬಂದಿಗಳು ಸುತ್ತಮುತ್ತಲಿನವವರೇ ಆಗಿರುತ್ತಾರೆ. ಅಲ್ಲದೆ, ಮೂರನೇ  ಅಲೆಯನ್ನು ಗಮನದಲ್ಲಿಟ್ಟುಕೊಂಡು ಎಸ್‌ಒಪಿಗಳನ್ನು ಸಿದ್ಧಪಡಿಸುವ ಅಗತ್ಯವಿದೆ ಎಂದು ಹೇಳಿದರು.
 

SCROLL FOR NEXT