ರಾಜ್ಯ

ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ

ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ.

ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಜೀವನದಲ್ಲಿ ಅನೇಕ ಸಮಸ್ಯೆಗಳು ಉಧ್ಭವಿಸಿವೆ ಮತ್ತು ಈ ಮಾರಕ ಸಾಂಕ್ರಾಮಿಕದಿಂದ ಹಲವು ಕುಟುಂಬಗಳು ತಮ್ಮ ಗಳಿಸುವ ಸದಸ್ಯರನ್ನು ಕಳೆದುಕೊಂಡಿವೆ.

ಈ ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ ಎಂದು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ 15.06.2021 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅದಲ್ಲದೆ ಈ ಹಿಂದೆ ಈ ಸೌಲಭ್ಯವನ್ನು ಕೇವಲ ಔದ್ಯೋಗಿಕ ಗಾಯಗಳಾದ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತಿತ್ತು ಇದೀಗ ಈ ಸೌಲಭ್ಯವನ್ನು ಕೋವಿಡ್-19 ನಿಂದಾದ ಮರಣಗಳಿಗೂ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೀಗ ನೋಂದಾಯಿತ  ಮಹಿಳೆಯ ಮರಣವಾದ ಸಂದರ್ಭದಲ್ಲಿ ಅವರ ಪತಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಯೋಜನೆಯು 24.03.2020 ರಿಂದ ಎರಡು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆಯಡಿಯಲ್ಲಿ, ಅವಲಂಬಿತರ ಸೌಲಭ್ಯದಲ್ಲಿ ನೀಡಿದಂತೆಯೇ, ನಗದು ಲಾಭವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಅವಲಂಬಿತರ ಖಾತೆಗಳಲ್ಲಿ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ ಪರಿಹಾರವು ವಿಮಾದಾರರ ವೇತನದ ಶೇ.90% ಅಥವಾ  ರೂ.1800/- ಗಳಾಗಿರುತ್ತದೆ.

ಈ ಪರಿಹಾರವನ್ನು ಪಡೆಯಲು, ಹಕ್ಕುದಾರರು ಕೋವಿಡ್ -19 ಪಾಸಿಟಿವ್ ವರದಿ ಮತ್ತು ಮರಣ ಪ್ರಮಾಣ ಪತ್ರವನ್ನು ಹತ್ತಿರದ ಇ.ಎಸ್.ಐ ಶಾಖಾ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹತ್ತಿರದ ಇ.ಎಸ್.ಐ.ಸಿ ಕಛೇರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT