ರಾಜ್ಯ

ಚಿತ್ರದುರ್ಗ: ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಕೋವಿಡ್ ಗೆ ಬಲಿ

Raghavendra Adiga

ಚಿತ್ರದುರ್ಗ: ಮಹಾಮಾರಿ ಕೋವಿಡ್ ಗೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾ ಮ್ಯಾನ್ ಬಲಿಯಾಗಿದ್ದಾರೆ.

ಬಸವರಾಜ್ ಕೋಟಿ ಮೃತ ಕ್ಯಾಮೆರಾ ಮ್ಯಾನ್ .

ಕಳೆದ 10 ದಿನಗಳ ಹಿಂದೆ ಬಸವರಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅಂದಿನಿಂದ ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಹನ್ನೆರಡು ವರ್ಷದ ಮಗಳು, ಹತ್ತು ವರ್ಷದ ಮಗನಿದ್ದಾನೆ. ಅಲ್ಲದೆ ಪತ್ನಿ ಶಾಂತಾ, ಪೋಷಕರು, ಅಪಾರ ಬಂಧುಗಳನ್ನು ಅಗಲಿದ್ದಾರೆ.

SCROLL FOR NEXT