ರಾಜ್ಯ

ಕೊಡಗಿನಲ್ಲಿ ನಾಲ್ವರು ಕಳ್ಳ ಬೇಟೆಗಾರರ ಬಂಧನ

Raghavendra Adiga

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಬಂಧಿಸಿ ಅವರಿಂದ ಬೇಟೆಯಾಡಿದ್ದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊದಲ ಘಟನೆಯಲ್ಲಿ ಇಬ್ಬರು ಬೇಟೆಗಾರರು ಸೋಮವಾರ ಪೇಟೆ ತಾಲ್ಲೂಕಿನ ಜೇನುಕಲ್ಲು ರಕ್ಷಿತಾರಣ್ಯಕ್ಕೆ ನುಗ್ಗಿ ಪ್ರಾಣಿಗಳ ಬೇಟೆಯಾಡಿದ್ದಾರೆ. ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೊಸ ಗ್ರಾಮದ ಕಾವೇರಪ್ಪ ಅಲಿಯಾಸ್‍ ತಮೂ ಎಂಬಾತನ ಮನೆ ಮೇಲೆ ದಾಳಿ ನಡೆಸಿ ಎರಡು ಜಾತಿ ಜಿಂಕೆಗಳ ಐದು ಕೆ.ಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ, ಬಂಧಿತನಿಂದ ಬಂದೂಕು ಮತ್ತು ಮೂರು ಜೀವಂತ ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಕಾವೇರಪ್ಪನ ಜೊತೆಗಿದ್ದ ಮತ್ತೊಬ್ಬ ಬೇಟೆಗಾರ ಸುರೇಶ್‍ ನನ್ನೂ ಬಂಧಿಸಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಂಕೆ ಮಾಂಸವನ್ನು ಕೆಲ ಗ್ರಾಮಸ್ಥರೊಂದಿಗೆ ಹಂಚಿಕೊಂಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಮತ್ತೊಂದು ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ವರದಿಯಾಗಿದ್ದು, ಬೇಟೆಗಾರರು ಅರಣ್ಯ ನುಗ್ಗಿ ಪ್ರಾಣಿಗಳತ್ತ ಗುಂಡು ಹಾರಿಸಿದಾಗ, ಗುಂಡೇಟಿನ ಶಬ್ಧ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತರಾಗಿ ಇತರ ತಂಡಗಳನ್ನು ಎಚ್ಚರಿಸಿದ್ದಾರೆ. ಕಾರ್ ನಲ್ಲಿ ಬಿರುನಾಣಿ ಗ್ರಾಮದ ಮೂಲಕ ಅರಣ್ಯ ಗಡಿಯಲ್ಲಿ ಇಳಿದು ಕಾಡಿಗೆ ನುಗ್ಗಿದ್ದ ಆರು ಬೇಟೆಗಾರರ ಪೈಕಿ ಪ್ರೀತಮ್‍ ಮತ್ತು ರಾಬಿನ್‍ ತಿಮ್ಮಯ್ಯ ಎಂಬುವವರನ್ನು ಅರಣ್ಯ ಸಿಬ್ಬಂದಿ ಬಂದಿಸಿದ್ದಾರೆ. ಇತರ ನಾಲ್ವರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಬಂಧಿತರಿಂದ ಜಿಂಕೆ ಮರಿ ಮೃತದೇಹ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

SCROLL FOR NEXT