ಚಾಮರಾಜನಗರ: ಬಂಡೀಪುರ ಹುಲಿ ರಕ್ಷಿತಾರಣ್ಯ ಗಡಿಯಲ್ಲಿ ಶನಿವಾರ 9 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿರುವುದು ಕಂಡುಬಂದಿದೆ.
ಹುಲಿ ರಕ್ಷಿತಾರಣ್ಯದ ಹೆಡಿಯಾಳ ಉಪ ವಿಭಾಗದ ನುಗು ವನ್ಯಜೀವಿ ವಲಯದಲ್ಲಿ ಆನೆಗಳು ದಾಟದಂತೆ ನಿರ್ಮಿಸಲಾಗಿರುವ
ಕಂದಕದ ಬಳಿ ಹುಲಿಯ ಕಳೇಬರ ಕಂಡುಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸತ್ತ ಹುಲಿಯ ಮೃತದೇಹದ ಮೇಲೆ ಗಾಯದ ಗುರುತು ಕಂಡುಬಂದಿಲ್ಲ. ಹುಲಿಗೆ ವಿಷಪ್ರಾಶನವಾಗಿರುವುದು ಸಹ ಕಂಡುಬಂದಿಲ್ಲ. ಚರ್ಮ ಮತ್ತು ಉಗುರುಗಳು ದೇಹದಲ್ಲೇ ಇರುವುದರಿಂದ ಬೇಟೆಯಿಂದ ಹುಲಿ ಸತ್ತಿಲ್ಲ. ಸಹಜ ಕಾರಣಗಳಿಂದ ಪ್ರಾಣಿ ಸತ್ತಿರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.