ಕಾಳಿ ನದಿ ತಿರುವು ಯೋಜನೆ ಕಾಮಗಾರಿ 
ರಾಜ್ಯ

ಕಾಳಿ ನದಿ ತಿರುವು ಯೋಜನೆಗೆ ದಾಂಡೇಲಿ, ಜೋಯಿಡಾ ನಿವಾಸಿಗಳ ವಿರೋಧ

ಪ್ರಸ್ತುತ ನಡೆಯುತ್ತಿರುವ ಕಾಳಿ ನದಿ ತಿರುವು ಯೋಜನೆಗೆ ಡಾಂಡೇಲಿ ಮತ್ತು ಜೋಯಿಡಾ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಯೋಜನೆ ಎಂದು ಬಿಂಬಿಸಲಾಗಿರುವ ಈ ಯೋಜನೆಯ ಇಡೀ ಪ್ರಕ್ರಿಯೆ ನದಿ, ಜೀವ ವೈವಿದ್ಯತೆ ಮತ್ತು ಈ ಭಾಗದ ಜನರಿಗೆ ಹಾನಿಯಾಗಲಿದೆ ಎಂದು ಆರೋಪಿಸಿದ್ದಾರೆ.

ದಾಂಡೇಲಿ: ಪ್ರಸ್ತುತ ನಡೆಯುತ್ತಿರುವ ಕಾಳಿ ನದಿ ತಿರುವು ಯೋಜನೆಗೆ ಡಾಂಡೇಲಿ ಮತ್ತು ಜೋಯಿಡಾ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಯೋಜನೆ ಎಂದು ಬಿಂಬಿಸಲಾಗಿರುವ ಈ ಯೋಜನೆಯ ಇಡೀ ಪ್ರಕ್ರಿಯೆ ನದಿ, ಜೀವ ವೈವಿದ್ಯತೆ ಮತ್ತು ಈ ಭಾಗದ ಜನರಿಗೆ ಹಾನಿಯಾಗಲಿದೆ ಎಂದು ಆರೋಪಿಸಿದ್ದಾರೆ.

ತಾಲೂಕಿನ ವಿವಿಧ ಕಡೆಗಳಲ್ಲಿ  ಒಂದು ಮೀಟರ್ ವ್ಯಾಸದ ಬೃಹತ್ ಗಾತ್ರದ ಪೈಪ್ ಗಳನ್ನು ಅಳವಡಿಸಲಾಗುತ್ತಿದೆ. ಇದು ಕುಡಿಯುವ ನೀರಿನ ಯೋಜನೆ ಎಂದು ನಂಬಲು ಆಗುತ್ತಿಲ್ಲ. ಇದರಿಂದ ಕೈಗಾರಿಕೆಗಳು ಅಥವಾ ಭಾರೀ ನೀರಾವರಿ ಯೋಜನೆಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ಕಾಳಿ ಬ್ರಿಗೇಡ್ ಹೋರಾಟದ ಸಂಚಾಲಕ ಹಾಗೂ ಇಲ್ಲಿನ ಜನರು ಹೇಳುತ್ತಾರೆ.

ಅಲ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಉದ್ದೇಶ ಹೊಂದಿರುವುದಾಗಿ ಸರ್ಕಾರಿ ಅಧಿಕಾರಿಗಳು ಹೇಳುತ್ತಿದ್ದರೂ, ಸ್ಥಳೀಯರು ಇದನ್ನು ಕೇಳುತ್ತಿಲ್ಲ. ಅಲ್ನಾವರದಲ್ಲಿ 17 ಸಾವಿರ ಜನಸಂಖ್ಯೆಯಿದ್ದು, ಅಲ್ಲಿ ಅನೇಕ ನೀರಿನ ಮೂಲಗಳಿವೆ. ಅವರ ನೀರಿನ ಅಗತ್ಯತೆಯನ್ನು ಪೂರೈಸುವುದರೊಂದಿಗೆ ಅವರ ನೀರಾವರಿ ಅಗತ್ಯತೆಗಳನ್ನು ಈಡೇರಿಸಲಾಗುತ್ತಿದೆ ಎಂದು ಹೋರಾಟಗಾರ ಪ್ರಮೋದದ್ ಸಪ್ರೆ ಹೇಳಿದರು. 

ಈ ಯೋಜನೆ ಅವೈಜ್ಞಾನಿಕವಾಗಿದೆ. ನದಿಯಲ್ಲಿ ನೀರು ತುಂಬಿರುವುದು ಅವರಿಗೆ ಗೊತ್ತಿದೆ. ಆದಾಗ್ಯೂ, ಈ ಜಲಾಶಯಿಂದ 47 ಹಳ್ಳಿಗಳು ಮುಳುಗಡೆಯಾಗಲಿವೆ. ಈ ನದಿಗೆ ಆರು ಕಡೆಗಳಲ್ಲಿ ಡ್ಯಾಮ್ ಕಟ್ಟಲಾಗಿದೆ ಎಂದು ರೆಡ್ಕರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT