ಇಂದು ಬೆಳಗ್ಗೆ ಕಾವಾಡಿಗರು, ಮಾವುತರಿಗೆ ತಿಂಡಿ ಬಡಿಸಿ ತಾವು ಸೇವಿಸಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಶಾಸಕರು ಮತ್ತು ಜಿಲ್ಲಾಧಿಕಾರಿಗಳು 
ರಾಜ್ಯ

ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು; ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟ;  ಸಚಿವರು, ಶಾಸಕರು ಭಾಗಿ

ದಸರಾ ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಅಭಿಮನ್ಯು ಮತ್ತು ಇತರ ಆತರ ಆನೆಗಳಿಗೆ ಶುಕ್ರವಾರ ಭಾರ ಹೊರುವ ತಾಲೀಮು ಮೈಸೂರು ಅರಮನೆ ಆರವರಣದಲ್ಲಿ ಆರಂಭವಾಗಿದೆ.

ಮೈಸೂರು: ದಸರಾ ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಅಭಿಮನ್ಯು ಮತ್ತು ಇತರ ಆತರ ಆನೆಗಳಿಗೆ ಶುಕ್ರವಾರ ಭಾರ ಹೊರುವ ತಾಲೀಮು ಮೈಸೂರು ಅರಮನೆ ಆರವರಣದಲ್ಲಿ ಆರಂಭವಾಗಿದೆ.

ಈ ಸಂದರ್ಭದಲ್ಲಿ ಇಂದು ಬೆಳಗ್ಗೆ ಅರಮನೆಯಲ್ಲಿ ಮಾವುತರಿಗೆ ಮತ್ತು ಕಾವಾಡಿಗರಿಗೆ ಉಪಾಹಾರವನ್ನು ಒದಗಿಸಲಾಯಿತು. ಮೈಸೂರು ಜಿಲ್ಲಾಡಳಿತ, ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಉಪಾಹಾರ ಆತಿಥ್ಯವನ್ನು ಏರ್ಪಡಿಸಿದ್ದರು.

ಎಲ್ಲರಿಗೂ ಕೈಯಾರೆ ಉಪಾಹಾರಗಳನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಶಾಸಕರು, ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್ ತಿನಬಡಿಸಿದರು. ನಂತರ ಮಾವುತರು, ಕಾವಾಡಿಗರೊಂದಿಗೆ ಕುಳಿತು ಸಚಿವರು,  ಶಾಸಕರು ಸಹ ಉಪಾಹಾರ ಸೇವಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಅವರ ಯೋಗಕ್ಷೇಮ ವಿಚಾರಿಸಿದರು. 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು ಇಂದಿನಿಂದ ನಾಲ್ಕೈದು ದಿನಗಳ ಕಾಲ ತೀವ್ರ ತಾಲೀಮು ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT