ರಾಜ್ಯ

ಅಕ್ಟೋಬರ್ 20 ರಿಂದ ಬಂಡಿಪುರ ಹುಲಿ ಗಣತಿ ಆರಂಭ

Shilpa D

ಬೆಂಗಳೂರು: ಅಕ್ಟೋಬರ್ 20 ರಿಂದ 25ರವರೆಗೆ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಹುಲಿಗಳ ಗಣತಿ ಆರಂಭವಾಗಲಿದೆ.

ಕ್ಯಾಮರಾ  ಮತ್ತು ಕ್ಷೇತ್ರ ಸಿಬ್ಬಂದಿಯ ಲಭ್ಯತೆಯ ಆಧಾರದ ಮೇಲೆ ತರಬೇತಿಯನ್ನು ಪೂರ್ಣಗೊಳಿಸಲಾಗುತ್ತಿದೆ.
ಜನಗಣತಿಯ ಕ್ಷೇತ್ರ ಸಮೀಕ್ಷೆಯ ಕಾರ್ಯವು ಅಕ್ಟೋಬರ್ 20 ಅಥವಾ 25 ರಿಂದ ಆರಂಭವಾಗುವ ಸಾಧ್ಯತೆಯಿದೆ ಏಕೆಂದರೆ ಇದನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಮ್‌ಎಮ್ ಹಿಲ್ಸ್‌ನ ಸಿಬ್ಬಂದಿ ಅಕ್ಟೋಬರ್ 14 ರಿಂದ ಕ್ಯಾಮರಾ ಟ್ರ್ಯಾಪ್ ಸಮೀಕ್ಷೆ ಆರಂಭಿಸಲು ಸಜ್ಜಾಗಿದ್ದಾರೆ. "ನಾವು ತರಬೇತಿಗಾಗಿ ಕ್ಯಾಮೆರಾಗಳನ್ನು ಬೇರೆ ಹುಲಿ ಮೀಸಲುಗಳಿಂದ ಸಂಗ್ರಹಿಸಿರುವುದರಿಂದ ಇತರ ಮೀಸಲು ಮತ್ತು ಪ್ರದೇಶಗಳಿಗೆ ಕಳುಹಿಸುವ ಮೊದಲು ನಾವು  ಮೌಲ್ಯಮಾಪನಕ್ಕಾಗಿ  ಸಮೀಕ್ಷೆ ಮಾಡಲು ಬಯಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಳೆದ ವರ್ಷ ವಾರ್ಷಿಕ ಆಂತರಿಕ ಮೌಲ್ಯಮಾಪನವನ್ನು ಮಾಡಲಾಗದ ಕಾರಣ, ಜೂನ್-ಜುಲೈನಲ್ಲಿ ಸಮೀಕ್ಷೆ ಮಾಡಲಾಯಿತು. ಈ ಸಂಬಂಧ  ಎನ್ ಟಿ ಸಿಎಯೊಂದಿಗೆ ಚರ್ಚಿಸಲಾಯಿತು ಮತ್ತು ಯಾವುದೇ ದೋಷಗಳು ಕಂಡುಬರದ ಹೊರತು ಮೌಲ್ಯಮಾಪನ  ಪುನರಾವರ್ತಿಸುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು. 

ಆದ್ದರಿಂದ ಇತರ ಹುಲಿ ಮೀಸಲು ಪ್ರದೇಶಲ್ಲಿ ಮೌಲ್ಯಮಾಪನವನ್ನು ಮಾಡಲಾಗುವುದು, ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಇದನ್ನು ಮಾಡಲು ಅಸಂಭವವಾಗಿದೆ, ಆದರೆ ಇದನ್ನು ಹುಲಿಯೇತರ ಪ್ರದೇಶಗಳಲ್ಲಿ ಮಾಡಲಾಗುತ್ತದೆ ಎಂದು ಬಿಆರ್ ಟಿ ಹುಲಿ ರಕ್ಷಿತಾರಣ್ಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಸರಾ ಉತ್ಸವಗಳು ಮುಗಿಯುವುದಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ, ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಹಿಂದಿರುಗಿದ ನಂತರ ಸಸ್ಯಹಾರಿ ಮತ್ತು ಮಾಂಸಾಹಾರಿಗಳ ಮೌಲ್ಯಮಾಪನವನ್ನು ನಿಖರವಾಗಿ ಮಾಡಲಾಗುತ್ತದೆ. ನಾಗರಹೊಳೆ, ಭದ್ರಾ, ಕುದುರೆಮುಖ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಗಣತಿಯ ವ್ಯಾಯಾಮಕ್ಕೆ ಬಳಸಿಕೊಳ್ಳುವ ಮುನ್ನ ಆಪ್‌ನ ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಶೀಲಿಸುತ್ತಿದ್ದಾರೆ.

SCROLL FOR NEXT