ರಾಜ್ಯ

ಬಿನೀಶ್ ಕೊಡಿಯೇರಿಗೆ ಹೈಕೋರ್ಟ್ ನಿಂದ  ಜಾಮೀನು ಮಂಜೂರು

Nagaraja AB

ಬೆಂಗಳೂರು: ಡ್ರಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇರಳ ಸಿಪಿಐ(ಎಂ) ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 

ಧಾರವಾಡ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿ ಉಮಾ, ಬಿನೇಶ್ ಕೊಡಿಯೇರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ, ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದರು. 2021ರ ಫೆಬ್ರವರಿ ತಿಂಗಳಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ವಜಾಗೊಳಿಸಿದ ನಂತರ ಬಿನೇಶ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ನಂಬರ್ ನ ಆರೋಪಿಯಾಗಿರುವ ಡ್ರಗ್ ಪೆಡ್ಲರ್ ಮೊಹಮ್ಮದ್ ಅನೂಪ್ ಮತ್ತಿತರೊಂದಿಗೆ ಹಣ ವರ್ಗಾವಣೆಯಲ್ಲಿ ಬಿನೇಶ್ ತೊಡಗಿಸಿಕೊಂಡಿದ್ದರು ಎಂದು ಇಡಿ ಆರೋಪಿಸಿತ್ತು.  

ಬಿನೇಶ್ ಹಣ ವರ್ಗಾವಣೆ ಅಪರಾಧದಲ್ಲಿ ತಪಿತಸ್ಥರಾಗಿದ್ದಾರೆ.  ಆ ಮೂಲಕ, ಅವರು 2002ರ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಿಗದಿತ ಅಪರಾಧವನ್ನು ಮಾಡಿದ್ದಾರೆ ಮತ್ತು ಅಪರಾಧದ ಪ್ರಕ್ರಿಯೆಯನ್ನು ಸೃಷ್ಟಿಸಿದ್ದಾರೆ. ಹೀಗಾಗಿ, ಅವರು ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾದ  ಅಪರಾಧ ಮಾಡಿರುವುದಾಗಿ ಇಡಿ ವಾದಿಸಿತು.
 

SCROLL FOR NEXT