ಹಾವಿನ ಚಿತ್ರ 
ರಾಜ್ಯ

ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟ

 ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್  ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ. 

ಬೆಂಗಳೂರು: ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್  ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ.  ಆದಾಗ್ಯೂ, ಈ ಲೇಔಟ್ ನಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ತುಂಬಿ ಹರಿಯುವ ಚರಂಡಿಗಳು ಹಾಗೂ ರಾಶಿ ರಾಶಿ ಕಸದಿಂದಾಗಿ ಹಾವುಗಳು ನಿತ್ಯ ಬರುವಂತಾಗಿದೆ. 

ಇತ್ತೀಚಿನ ಮಳೆಯ ಸಮಯದಲ್ಲಿ ಸರೀಸೃಪಗಳ ಕಾಟ ವಿಪರೀತವಾಗಿದ್ದು,  ಹಾವುಗಳು ತಮ್ಮ ಮನೆಗಳಿಗೆ ಪ್ರವೇಶಿಸುತ್ತವೆ ಎಂಬ ಭಯದಿಂದ ನೆಲ ಮಹಡಿಯಲ್ಲಿರುವ ಕೆಲವು ಕುಟುಂಬಗಳು ರಾತ್ರಿಯಿಡೀ ತಾರಸಿಯ ಮೇಲೆ ಕಾಲ ಕಳೆಯುವಂತಾಗಿದೆ ಎಂದು ನಿವಾಸಿ ವಿಮಲೇಶ್ ಚಿನ್ನಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಚರಂಡಿಯಿಂದ ರಾಜಕಾಲುವೆವರೆಗೆ ವಿನ್ಯಾಸ ತಪ್ಪಿರುವುದು ಮುಖ್ಯ ಸಮಸ್ಯೆಯಾಗಿದೆ. ಎರಡನೆಯದು ಎತ್ತರದ ಸ್ಥಳದಲ್ಲಿದ್ದು, ಮಳೆಯಾದಾಗ ನೀರು ಹಿಮ್ಮುಖ ದಿಕ್ಕಿನಲ್ಲಿ ಹರಿದು, ಸಂಪೂರ್ಣವಾಗಿ ಮಳೆ ನೀರು ತುಂಬಿಕೊಳ್ಳುತ್ತದೆ ಎಂದು 19ನೇ ಬ್ಲಾಕ್ ಅರ್ಕಾವತಿ ಲೇಔಟ್ ಭೂಮಾಲೀಕರು ಮತ್ತು ಹಂಚಿಕೆದಾರರ ಸಂಘದ ಜಂಟಿ ಕಾರ್ಯದರ್ಶಿ ಆರ್. ಕಿಶೋರ್ ಹೇಳುತ್ತಾರೆ. ಇಲ್ಲಿನ ಜನರು ತಿಂಗಳಿಗೆ 6 ಸಾವಿರದಿಂದ ಏಳು ಸಾವಿರ ರೂ. ಶುಲ್ಕ ಪಾವತಿಸಿದರೂ ನೂತನ ಕಟ್ಟಡಗಳಿಗೆ ದಿನ ನಿತ್ಯ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು. 

ಮಳೆ ಬಂದಾಗ ರಸ್ತೆ ಮೇಲೆ ಎರಡು ಅಡಿ ನೀರು ತುಂಬಿ, ಜನರು ಓಡಾದಂತಾಗುತ್ತದೆ ಎಂದು ಶಿಕ್ಷಕ ಕೆ. ಅಮರ್ ಸಮಸ್ಯೆಗಳನ್ನು ತೋಡಿಕೊಂಡರು. ಅರ್ಕಾವತಿ ಲೇಔಟ್ ಗೆ  ಮೂಲಸೌಕರ್ಯವನ್ನು ಕಲ್ಪಿಸಲು ಎರಡು ವರ್ಷಗಳ ಹಿಂದೆಯೇ  ಬಿಡಬ್ಲ್ಯೂಎಸ್ ಎಸ್ ಬಿಗೆ   75 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಬಿಡಿಎ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಿ. ಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ