ಹಾವಿನ ಚಿತ್ರ 
ರಾಜ್ಯ

ಬೆಂಗಳೂರು: ಅರ್ಕಾವತಿ ಬಡಾವಣೆ ನಿವಾಸಿಗಳಿಗೆ ಹಾವುಗಳ ಕಾಟ

 ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್  ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ. 

ಬೆಂಗಳೂರು: ಸುಮಾರು 1 ಸಾವಿರ ನಿವೇಶನಗಳನ್ನು ಒಳಗೊಂಡಿರುವ ಚಳಗೆರೆ ಪ್ರದೇಶದ 19ನೇ ಬ್ಲಾಕ್  ವ್ಯಾಜ್ಯದಿಂದ ಮುಕ್ತವಾಗಿದ್ದು, ಅರ್ಕಾವತಿ ಲೇಔಟ್ ನ ಇತರ ಭಾಗಗಳಿಗಿಂತ ಭಿನ್ನವಾಗಿದೆ.  ಆದಾಗ್ಯೂ, ಈ ಲೇಔಟ್ ನಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ತುಂಬಿ ಹರಿಯುವ ಚರಂಡಿಗಳು ಹಾಗೂ ರಾಶಿ ರಾಶಿ ಕಸದಿಂದಾಗಿ ಹಾವುಗಳು ನಿತ್ಯ ಬರುವಂತಾಗಿದೆ. 

ಇತ್ತೀಚಿನ ಮಳೆಯ ಸಮಯದಲ್ಲಿ ಸರೀಸೃಪಗಳ ಕಾಟ ವಿಪರೀತವಾಗಿದ್ದು,  ಹಾವುಗಳು ತಮ್ಮ ಮನೆಗಳಿಗೆ ಪ್ರವೇಶಿಸುತ್ತವೆ ಎಂಬ ಭಯದಿಂದ ನೆಲ ಮಹಡಿಯಲ್ಲಿರುವ ಕೆಲವು ಕುಟುಂಬಗಳು ರಾತ್ರಿಯಿಡೀ ತಾರಸಿಯ ಮೇಲೆ ಕಾಲ ಕಳೆಯುವಂತಾಗಿದೆ ಎಂದು ನಿವಾಸಿ ವಿಮಲೇಶ್ ಚಿನ್ನಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಚರಂಡಿಯಿಂದ ರಾಜಕಾಲುವೆವರೆಗೆ ವಿನ್ಯಾಸ ತಪ್ಪಿರುವುದು ಮುಖ್ಯ ಸಮಸ್ಯೆಯಾಗಿದೆ. ಎರಡನೆಯದು ಎತ್ತರದ ಸ್ಥಳದಲ್ಲಿದ್ದು, ಮಳೆಯಾದಾಗ ನೀರು ಹಿಮ್ಮುಖ ದಿಕ್ಕಿನಲ್ಲಿ ಹರಿದು, ಸಂಪೂರ್ಣವಾಗಿ ಮಳೆ ನೀರು ತುಂಬಿಕೊಳ್ಳುತ್ತದೆ ಎಂದು 19ನೇ ಬ್ಲಾಕ್ ಅರ್ಕಾವತಿ ಲೇಔಟ್ ಭೂಮಾಲೀಕರು ಮತ್ತು ಹಂಚಿಕೆದಾರರ ಸಂಘದ ಜಂಟಿ ಕಾರ್ಯದರ್ಶಿ ಆರ್. ಕಿಶೋರ್ ಹೇಳುತ್ತಾರೆ. ಇಲ್ಲಿನ ಜನರು ತಿಂಗಳಿಗೆ 6 ಸಾವಿರದಿಂದ ಏಳು ಸಾವಿರ ರೂ. ಶುಲ್ಕ ಪಾವತಿಸಿದರೂ ನೂತನ ಕಟ್ಟಡಗಳಿಗೆ ದಿನ ನಿತ್ಯ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ ಎಂದು ಅವರು ತಿಳಿಸಿದರು. 

ಮಳೆ ಬಂದಾಗ ರಸ್ತೆ ಮೇಲೆ ಎರಡು ಅಡಿ ನೀರು ತುಂಬಿ, ಜನರು ಓಡಾದಂತಾಗುತ್ತದೆ ಎಂದು ಶಿಕ್ಷಕ ಕೆ. ಅಮರ್ ಸಮಸ್ಯೆಗಳನ್ನು ತೋಡಿಕೊಂಡರು. ಅರ್ಕಾವತಿ ಲೇಔಟ್ ಗೆ  ಮೂಲಸೌಕರ್ಯವನ್ನು ಕಲ್ಪಿಸಲು ಎರಡು ವರ್ಷಗಳ ಹಿಂದೆಯೇ  ಬಿಡಬ್ಲ್ಯೂಎಸ್ ಎಸ್ ಬಿಗೆ   75 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಬಿಡಿಎ ಎಕ್ಸಿಕ್ಯೂಟಿವ್ ಎಂಜಿನಿಯರ್ ಜಿ. ಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT