ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳ್ಳಂದೂರು ಫ್ಲೈ ಓವರ್ ಬೀಳಿಸುವ ಯೋಜನೆ ಇಲ್ಲ: ಬಿಎಂಆರ್ ಸಿಎಲ್

ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ. ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ.

ಬೆಂಗಳೂರು: ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ.  ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ.

ಇಬ್ಬಲೂರು ಮತ್ತು ಬೆಳ್ಳಂದೂರು ಮೆಟ್ರೋ ನಿಲ್ದಾಣ ನಡುವಿನ ಮೇಲ್ಸುತುವೆ ಮಾರ್ಗವನ್ನು ಅತಿಕ್ರಮಿಸಿದ್ದಲ್ಲಿ ಈಗಿರುವ ಸ್ಥಳದ ಯಾವುದೇ ಒಂದು ಬದಿಯಲ್ಲಿ ಲಭ್ಯವಿರುವ ಸುಮಾರು 60-70 ಮೀಟರ್ ನಷ್ಟು ಜಾಗದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಬಿಎಂಆರ್ ಸಿಎಲ್ ತಿಳಿಸಿದೆ. 

 ಇಬ್ಬಲೂರು ಮತ್ತು ಬೆಳ್ಳಂದೂರು ಮೆಟ್ರೋ ನಿಲ್ದಾಣ ನಡುವಿನ ಮೇಲ್ಸುತುವೆ ಕಾಮಗಾರಿ ಇನ್ನೂ ನಡೆಯುತ್ತಿದ್ದು, ಯಾವುದೇ ರೀತಿಯ ಅತಿಕ್ರಮವಾಗಿಲ್ಲ, ಹೀಗಾಗಿ  ಸ್ಥಳಾಂತರವಾಗಲೀ ಅಥವಾ ಧ್ವಂಸಗೊಳಿಸುವ ಅಗತ್ಯತೆ ಉದ್ಬವಿಸದು ಎಂದು ಬಿಎಂಆರ್ ಸಿಲ್ ಹೇಳಿದೆ. 

ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಂತದ ಪ್ರಸ್ತಾವಿತ ಮೇಲ್ಸುತುವೆ ಪ್ರದೇಶದ ಬಳಿಯ ಮಾರ್ಗದ ಕಾಮಗಾರಿಗಾಗಿ ಸಂಬಂಧಿತ ಕ್ಲಿಯರೆನ್ಸ್ ಗಾಗಿ ಬಿಬಿಎಂಪಿಯಿಂದ ವಿವರಗಳನ್ನು ಬಿಎಂಆರ್ ಸಿಎಲ್ ಕೇಳಿದೆ. 

ಬಿಬಿಎಂಪಿಗೆ ಬರೆದಿರುವ ಪತ್ರದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ. ಆರ್. ಪುರಂ ವರಿಗೆ 2-ಎ ಹಂತದ ಮೆಟ್ರೋ ಯೋಜನೆಗಾಗಿ ಬೆಳ್ಳಂದೂರು ಫ್ಲೈ ಓವರ್ ಧ್ವಂಸಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಬಿಎಂಆರ್ ಸಿಎಲ್ ನ ಎಂಜಿನಿಯರ್ ಒಬ್ಬರು ಮಂಗಳವಾರ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT