ಪೋಷಕರೊಂದಿಗೆ ಸಾತ್ವಿಕ್ 
ರಾಜ್ಯ

ಜೆಇಇ ಮುಖ್ಯ ಪರೀಕ್ಷೆ: ರಾಜ್ಯದ ಸಾತ್ವಿಕ್ ಗೆ ನೂರಕ್ಕೆ ನೂರು ಅಂಕ!

ಜಂಟಿ ಪ್ರವೇಶ ಪರೀಕ್ಷೆ(JEE)ಯ ಮುಖ್ಯ ಪರೀಕ್ಷೆ-2022ರಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ಮೊದಲ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 23 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಓಲಿಂಪಿಯಾಡ್ ಶಾಲೆಯ ಬೊಯ ಹರೇನ್ ಸಾತ್ವಿಕ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. 

ಬೆಂಗಳೂರು: ಜಂಟಿ ಪ್ರವೇಶ ಪರೀಕ್ಷೆ(JEE)ಯ ಮುಖ್ಯ ಪರೀಕ್ಷೆ-2022ರಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿ ಮೊದಲ ಸ್ಥಾನ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 23 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಓಲಿಂಪಿಯಾಡ್ ಶಾಲೆಯ ಬೊಯ ಹರೇನ್ ಸಾತ್ವಿಕ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. 

ನಿನ್ನೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಜೆಇಇ ಮುಖ್ಯ ಪರೀಕ್ಷೆ-2022ರ ಪೇಪರ್ -1 ನ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ದೇಶಾದ್ಯಂತ 8,72, 432 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.

ಬೊಯ ಹರೇನ್ ಸಾತ್ವಿಕ್ ಶೇಕಡಾ 100ರಷ್ಟು ಫಲಿತಾಂಶ ಗಳಿಸಿ ಅಖಿಲ ಭಾರತ ಮಟ್ಟದಲ್ಲಿ ನಂಬರ್ 1 ರ್ಯಾಂಕ್ ಗಳಿಸಿದ್ದಾರೆ. ದೇಶದಲ್ಲಿ ಶೇಕಡಾ 100 ರ್ಯಾಂಕ್ ಗಳಿಸಿದ 23 ವಿದ್ಯಾರ್ಥಿಗಳಲ್ಲಿ ಕರ್ನಾಟಕದಿಂದ ಸಾತ್ವಿಕ್ ಮಾತ್ರ ಸ್ಥಾನ ಪಡೆದಿದ್ದಾರೆ.

ಸಾತ್ವಿಕ್ ಪರೀಕ್ಷೆಗೆ ತಯಾರಿ ನಡೆಸಿದ್ದು ಹೇಗೆ?: ನಂಬರ್ 1 ರ್ಯಾಂಕ್ ಪಡೆಯಲು ತಾವು ನಡೆಸಿದ ಅಧ್ಯಯನವನ್ನು ಸಾತ್ವಿಕ್ ಹೀಗೆ ಹೇಳಿಕೊಳ್ಳುತ್ತಾರೆ. ಮುಖ್ಯ ಪರೀಕ್ಷೆಗೆ ಮುನ್ನ ನಾನು ಅಣಕು ಪರೀಕ್ಷೆ(Mock test) ತೆಗೆದುಕೊಂಡೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಮೇಲೆ ಹೆಚ್ಚಿನ ಗಮನ ಹರಿಸಿದ್ದೆ ಎಂದರು.

ಐಐಟಿ ಬಾಂಬೆಯಲ್ಲಿ ಪ್ರವೇಶ ಪಡೆದು ಕಂಪ್ಯೂಟರ್ ಸೈನ್ಸ್ ನಲ್ಲಿ ಮುಂದಿನ ಪದವಿ ಗಳಿಸುವ ಕನಸು ಕಂಡಿರುವ ಸಾತ್ವಿಕ್ ಜೆಇಇ ಅಡ್ವಾನ್ಸ್ ಡ್ ಪರೀಕ್ಷೆ ಬರೆಯುವ ಯೋಚನೆಯಲ್ಲಿ ಕೂಡ ಇದ್ದಾರೆ. ಭೌತಶಾಸ್ತ್ರ, ಗಣಿತಶಾಸ್ತ್ರದಲ್ಲಿ 100ಕ್ಕೆ 100, ರಸಾಯನಶಾಸ್ತ್ರದಲ್ಲಿ ಶೇಕಡಾ 98.98 ಅಂಕ ಗಳಿಸಿದ್ದಾರೆ.

ದೇಶದಲ್ಲಿ 100 ಶೇಕಡಾ ಅಂಕ ಗಳಿಸಿದ ನಾಲ್ಕು OBC-NCL ವರ್ಗದ ವಿದ್ಯಾರ್ಥಿಗಳಲ್ಲಿ ಸಾಥ್ವಿಕ್ ಕೂಡ ಒಬ್ಬರು. ಈ ಮಧ್ಯೆ, ಎನ್ಟಿಎ ಹೊರಡಿಸಿದ ಅಂಕಿಅಂಶಗಳ ಪ್ರಕಾರ, ಪವಿತ್ರಾ ಗುಪ್ತಾ ಶೇಕಡಾ 99.94 ರೊಂದಿಗೆ ಕರ್ನಾಟಕದ ಮಹಿಳಾ ಟಾಪರ್ ಆಗಿದ್ದಾರೆ. ಕರ್ನಾಟಕದ ವಿದ್ಯಾರ್ಥಿ ತನ್ಮಯ್ ಗೆಜಪತಿ ಅವರು ಪರಿಶಿಷ್ಟ ಪಂಗಡದ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಟಾಪರ್ ಆಗಿದ್ದು, ಶೇಕಡಾ 99.94 ಅಂಕ ಗಳಿಸಿದ್ದಾರೆ.

ಇಬ್ಬರು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಟಾಪರ್‌ಗಳಾದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಅಪೂರ್ವ್ ಟಂಡನ್ ಮತ್ತು ನಾರಾಯಣ ಇ-ಟೆಕ್ನೋ ಸ್ಕೂಲ್‌ನ ಶಿಶಿರ್ ಆರ್‌ಕೆ ಅವರು ಅಗ್ರ 100 ರ್ಯಾಂಕಿಂಗ್‌ನಲ್ಲಿದ್ದಾರೆ, ಶಿಶಿರ್ ಅಖಿಲ ಭಾರತ ಮಟ್ಟದಲ್ಲಿ 56 ಮತ್ತು ಅಪೂರ್ವ್ 71ನೇ ರ್ಯಾಂಕ್ ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT