ಸಾಂದರ್ಭಿಕ ಚಿತ್ರ 
ರಾಜ್ಯ

ಪರಿಷ್ಕೃತ ಪಠ್ಯಪುಸ್ತಕಗಳ ಮರು ಪರಿಷ್ಕರಣೆ: ವೆಬ್ ಸೈಟ್ ನಲ್ಲಿ ಪಠ್ಯ ಭಾಗ ಅಪ್ ಲೋಡ್

ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರದಿಂದ ಅನುಮೋದಿಸಲಾದ ಪರಿಷ್ಕೃತ ಪಠ್ಯಪುಸ್ತಕಗಳ ಮರುಪರಿಷ್ಕೃತ ಭಾಗಗಳ ದೋಷ ಅಥವಾ ಕಿರುಪುಸ್ತಕದ ವಿದ್ಯುನ್ಮಾನ ಪ್ರತಿ(Soft copy) ಅಪ್‌ಲೋಡ್ ಮಾಡಿದೆ.

ಬೆಂಗಳೂರು: ಕರ್ನಾಟಕ ಪಠ್ಯಪುಸ್ತಕಗಳ ಸೊಸೈಟಿ (KTBS) ವೆಬ್‌ಸೈಟ್‌ನಲ್ಲಿ ರಾಜ್ಯ ಸರ್ಕಾರದಿಂದ ಅನುಮೋದಿಸಲಾದ ಪರಿಷ್ಕೃತ ಪಠ್ಯಪುಸ್ತಕಗಳ ಮರುಪರಿಷ್ಕೃತ ಭಾಗಗಳ ದೋಷ ಅಥವಾ ಕಿರುಪುಸ್ತಕದ ವಿದ್ಯುನ್ಮಾನ ಪ್ರತಿ(Soft copy) ಅಪ್‌ಲೋಡ್ ಮಾಡಿದೆ.

ಪುಸ್ತಕಗಳನ್ನು ಮುದ್ರಿಸಿ ಸೆಪ್ಟೆಂಬರ್ ಮೊದಲ ವಾರದೊಳಗೆ ರಾಜ್ಯದ ಎಲ್ಲಾ 70 ಸಾವಿರ ಶಾಲೆಗಳಿಗೆ ವಿತರಿಸಲಾಗುವುದು ಎಂದು ಕೆಟಿಬಿಎಸ್ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಎಂ.ಪಿ ತಿಳಿಸಿದ್ದಾರೆ.

ಶಾಲೆಗಳು ಪುನರಾರಂಭವಾದ ಮೂರು ತಿಂಗಳ ನಂತರ ಎಲ್ಲಾ ಪರಿಷ್ಕೃತ ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದೆ. ಶೇಕಡಾ 99ರಷ್ಟು ವಿತರಣೆಯಾಗಿದ್ದು, ಉಳಿದವು ಈ ವಾರದೊಳಗೆ ಶಾಲೆಗಳಿಗೆ ತಲುಪುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಶಿಕ್ಷಣ ಇಲಾಖೆಯು ಪರಿಷ್ಕೃತ ಪಠ್ಯಪುಸ್ತಕಗಳನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ಮುದ್ರಿಸುತ್ತಿದ್ದು, ಬುಕ್‌ಲೆಟ್‌ಗಳಿಗೆ 12 ಲಕ್ಷ ರೂಪಾಯಿ ವೆಚ್ಚವಾಗಿದೆ. 

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು 6-10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಮತ್ತು 1-10 ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿತ್ತು. 534 ಶೀರ್ಷಿಕೆಗಳಲ್ಲಿ, 83ನ್ನು ಪರಿಷ್ಕರಿಸಿ ಅನುಮೋದಿಸಲಾಗಿದೆ. 

ಆದರೆ ಕೆಲವು ಅಧ್ಯಾಯಗಳ ಬಗ್ಗೆ ಸಮಾಜದ ಹಲವಾರು ವರ್ಗಗಳಿಂದ ಆಕ್ಷೇಪಣೆಗಳ ನಂತರ, ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ಮರು ಪರಿಷ್ಕರಣೆಯನ್ನು ಕೈಗೆತ್ತಿಕೊಂಡಿತು. ಎಂಟು ತಿದ್ದುಪಡಿಗಳನ್ನು ಮಾಡಿ ಅವುಗಳನ್ನು ಅನುಮೋದಿಸಿತು. ಈ ಎಂಟು ತಿದ್ದುಪಡಿಗಳನ್ನು ಈಗ ಕಿರುಪುಸ್ತಕದಲ್ಲಿ ಮುದ್ರಿಸಲಾಗಿದೆ.

ಪ್ರತಿ ಶಾಲೆಗೆ ಈಗ ತಲಾ ಒಂದು ಬುಕ್‌ಲೆಟ್ ನೀಡಲಾಗುವುದು, ಆಯಾ ತರಗತಿಗಳ ಶಿಕ್ಷಕರು ನಿರ್ದಿಷ್ಟ ಸಾಲು ಅಥವಾ ಪದ ಕಾಣೆಯಾಗಿದೆ ಅಥವಾ ಅನುಮೋದಿತ ತಿದ್ದುಪಡಿಗಳನ್ನು ಸೇರಿಸಲು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಮುದ್ರಿಸುವಾಗ ತಿದ್ದುಪಡಿಗಳನ್ನು ಸೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT