ಸಾಂದರ್ಭಿಕ ಚಿತ್ರ 
ರಾಜ್ಯ

ಚನ್ನಪಟ್ಟಣ: ಚಿಕಿತ್ಸೆಗೆ ಬಂದು ಚಿನ್ನದ ಸರ ಕಳೆದುಕೊಂಡಿದ್ದ ವೃದ್ಧೆ;  ಪೊಲೀಸರಿಗೆ ಸರ ನೀಡಿ ಪ್ರಾಮಾಣಿಕತೆ ಮರೆದ ಯುವಕ!

ವೃದ್ದೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿ, ಯುವಕನನ್ನು ಉತ್ತೇಜಿಸಿದ್ದಾರೆ.

ರಾಮನಗರ: ವೃದ್ದೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿ, ಯುವಕನನ್ನು ಉತ್ತೇಜಿಸಿದ್ದಾರೆ.

ಚನ್ನಪಟ್ಟಣದ ಪುಣ್ಯ ಆಸ್ಪತ್ರೆಗೆ ಬಂದ ವೃದ್ಧೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಸರ ಹಿಂದಿರುಗಿಸಿದ ರಾಮನಗರ ‌ಜಿಲ್ಲೆಯ ಚನ್ನಪಟ್ಟಣದ ಯುವಕನಿಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಶಂಸನಾ ಪತ್ರ ನೀಡಿದ್ದಾರೆ.  ವೃದ್ದೆ ಜಯಲಕ್ಷಮ್ಮ ಅವರು ಚಿಕಿತ್ಸೆಗೆಂದು ಬಂದು 45 ಗ್ರಾಂ ಚಿನ್ನದ ಸರವನ್ನ ಚನ್ನಪಟ್ಟಣದ ಪುಣ್ಯ ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗಿದ್ದರು.

ಆಗಸ್ಟ್ 14 ರಂದು ಈ ಘಟನೆ ನಡೆದಿತ್ತು. ಅದೇ ದಿನ ಹರ್ಷವರ್ಧನ್ ಸಹ ಪುಣ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದ. ಅಲ್ಲಿ ಚಿನ್ನದ ಸರ ಸಿಕ್ಕಿದಾಗ ಅದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮೂಲಕ, ಪೊಲೀಸರಿಗೆ ತಲುಪಿಸಿದ್ರು. ಆನಂತರ ಪೊಲೀಸರು ಪರಿಶೀಲನೆ ನಡೆಸಿ ಜಯಲಕ್ಷಮ್ಮ ಅವರಿಗೆ ಚಿನ್ನದ ಸರ ತಲುಪಿಸಿದ್ದರು.

ಚಿನ್ನದ ಸರವನ್ನು ತಪ್ಪಾದ ವ್ಯಕ್ತಿಗೆ ನೀಡಲು ನಾನು ಬಯಸಲಿಲ್ಲ, ಹೀಗಾಗಿ ಪೊಲೀಸರಿಗೆ ನೀಡಿದ್ದೆ, ನಂತರ ಅದು ವಾರಸುದಾರರಿಗೆ ತಲುಪಿತು, ಇದರಿಂದ ನನಗೆ ಸಂತೋಷವಾಯಿತು ಎಂದಿದ್ದಾರೆ, ‘‘ನಿವೃತ್ತ ಸರಕಾರಿ ಸಿಬ್ಬಂದಿಯಾಗಿದ್ದ ಮಾಲೀಕ ಜಯಲಕ್ಷ್ಮಮ್ಮ (64) ಅವರಿಗೆ ಚಿನ್ನದ ಸರ ಹಿಂತಿರುಗಿಸಲಾಗಿದೆ.

ಪೊಲೀಸರು  ಆಕೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಬಂದಾಗ ಜಯಲಕ್ಷ್ಮಮ್ಮ ತೀವ್ರ ಅಸ್ವಸ್ಥರಾಗಿದ್ದರು. ಅವರು ಒಂದು ವಾರ್ಡ್‌ನಲ್ಲಿದ್ದರು, ನಂತರ ಅವಳ ಪ್ರಜ್ಞೆ ಬಂದ ನಂತರ ಸ್ಕ್ಯಾನಿಂಗ್ ರೂಂ ನಲ್ಲಿದ್ದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel