ರಾಜ್ಯ

ಮೇಲ್ಜಾತಿಯವರಿಂದ ಅವಮಾನ, ಹಲ್ಲೆ: ಮನನೊಂದು ಮುಳಬಾಗಿಲಿನ ಯುವಕ ಆತ್ಮಹತ್ಯೆ

Sumana Upadhyaya

ಮುಳಬಾಗಿಲು: ಮೇಲ್ಜಾತಿಯವರಿಂದ ಆದ ಅವಮಾನವನ್ನು ಸಹಿಸಲಾಗದೆ ದಲಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿದೆ.

ಉದಯ ಕಿರಣ ಎಂಬ ದಲಿತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉದಯ ಕಿರಣ ಬೈಕ್ ನಲ್ಲಿ ಹೋಗುವಾಗ ಮೇಲ್ಜಾತಿಯವರ ಬೈಕನ್ನು ಹಿಂದಿಕ್ಕಿ ಹೋಗಿದ್ದಾನೆ ಎಂದು ಆಕ್ರೋಶಗೊಂಡು ಜಗಳಕ್ಕಿಳಿದು ಮೇಲ್ಜಾತಿ ಯುವಕರು ಮನಸಾರೆ ಬೈದಿದ್ದು ಮಾತ್ರವಲ್ಲದೆ ಉದಯ್ ನನ್ನು ಮರಕ್ಕೆ ಕಟ್ಟಿ ಬಟ್ಟೆ ಬಿಚ್ಚಿ ಚೆನ್ನಾಗಿ ಹೊಡೆದಿದ್ದಾರೆ. 

ಇದರಿಂದ ಮಾನಸಿಕವಾಗಿ ಉದಯ್ ಕಿರಣ್ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದ್ದು ಅವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. 

SCROLL FOR NEXT