ರಾಜ್ಯ

ಅಡಿಗಾಸ್ ಯಾತ್ರಾ ಕೈಪಿಡಿ ಬಿಡುಗಡೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Manjula VN

ಬೆಂಗಳೂರು/ಹುಬ್ಬಳ್ಳಿ: ಅನುಭವಿ ಸೇವಾ ಪೂರೈಕೆದಾರ ಎಂದು ಪ್ರವಾಸೋದ್ಯಮ ಸಚಿವಾಲಯ ಮತ್ತು ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಅಡಿಗಾಸ್ ಯಾತ್ರಾ ತನ್ನ 2023 ರ ಕೈಪಿಡಿಯನ್ನು ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ಕೈಪಿಡಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆ ಮಾಡಿದರು. ಅಡಿಗಾಸ್ ಯಾತ್ರಾ ಸಂಸ್ಥಾಪಕ ಕೆ.ನಾಗರಾಜ್ ಅಡಿಗ ಮಾತನಾಡಿ, ಕೈಪಿಡಿಯಲ್ಲಿ ಅಂತಾರಾಷ್ಟ್ರೀಯ ಹಾಗೂ ಅಖಿಲ ಭಾರತ ಪ್ರವಾಸದ ಸಂಪೂರ್ಣ ವಿವರಗಳಿವೆ ಎಂದು ಹೇಳಿದರು.

2020ರ ಟೂರ್‌ ಪ್ಯಾಕೇಜ್‌ಗಳ ಸಮಗ್ರ ಮಾಹಿತಿ ವೆಬ್‌ಸೈಟ್ ಹಾಗೂ ಕೈಪಿಡಿಯಲ್ಲಿದೆ. ಗ್ರಾಹಕರು ತಮಗೆ ಅನುಕೂಲವಾಗುವ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವಂತೆ ವೆಬ್‌ಸೈಟ್ ರೂಪಿಸಲಾಗಿದೆ. ನೋಡಲು ಬಯಸುವ ಸ್ಥಳದ ಮಾಹಿತಿ ಅಥವಾ ಬಜೆಟ್ ಅನ್ನು ನಮೂದಿಸಿದರೂ ಅದಕ್ಕೆ ಸಂಬಂಧಿಸಿದ ಮಾಹಿತಿ ತಕ್ಷಣ ಲಭ್ಯವಾಗಲಿದೆ ಎಂದು ತಿಳಿಸಿದುರ. ಹೆಚ್ಚಿನ ವಿವರಗಳು www.adigasyatra.com ನಲ್ಲಿವೆ.

ಕಾರ್ಯಕ್ರಮದಲ್ಲಿ ಕಂಪನಿ ನಿರ್ದೇಶಕಿ ಆಶಾ ಅಡಿಗ, ಹಿರಿಯ ವ್ಯವಸ್ಥಾಪಕ ಸಿ ಎಸ್ ದ್ವಾರಕಾನಾಥ್ ಮತ್ತು ಎಚ್ ಕೆ ಪ್ರಸನ್ನ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ 08362 256678 ಅಥವಾ 94494 78944/70222 59003 ಸಂಪರ್ಕಿಸಬಹುದಾಗಿದೆ.

SCROLL FOR NEXT