ಪೊಲೀಸ್ ಠಾಣೆಯಲ್ಲಿರುವ 'ಬೀರಾ' ಬೆಕ್ಕು 
ರಾಜ್ಯ

ಗೌರಿಬಿದನೂರು: ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ 'ಬೀರಾ' ನೆರವು!

ಸರ್ಕಾರಿ ಕಚೇರಿಗಳಲ್ಲಿ ಇಲಿಗಳ ಹಾವಳಿಯಿಂದಾಗಿ ಅನೇಕ ದಾಖಲೆಗಳು ಅಸುರಕ್ಷಿತವಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಬೆಂಗಳೂರಿನಿಂದ 74 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಚಿಂತೆ ಇಲ್ಲ. ಕಾರಣ ಬೀರಾ.

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಇಲಿಗಳ ಹಾವಳಿಯಿಂದಾಗಿ ಅನೇಕ ದಾಖಲೆಗಳು ಅಸುರಕ್ಷಿತವಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಬೆಂಗಳೂರಿನಿಂದ 74 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಚಿಂತೆ ಇಲ್ಲ. ಕಾರಣ ಬೀರಾ.

ಸರ್ಕಾರಿ ದಾಖಲೆಗಳನ್ನೊಳಗೊಂಡ ಕಾಗದ ಪತ್ರಗಳನ್ನು ಕಚ್ಚಿ ತುಂಡರಿಸುವುದಕ್ಕೆ ಇಲಿಗಳಿಗೆ  ಬೀರಾ ಎಂಬ ಬೆಕ್ಕು ಅಡ್ಡಿಯಾಗಿದೆ. ಕಳೆದ ಒಂದು ವಾರದಲ್ಲಿ ಈ ಬೆಕ್ಕಿಗೆ ಮತ್ತೊಂದು ಬೆಕ್ಕು ಜೊತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಎಲ್ಲರ ಗಮನದ ಕೇಂದ್ರಬಿಂದುವಾಗಿದೆ.

ಸರ್ಕಲ್ ಇನ್ಸ್ ಪೆಕ್ಟರ್ ಎಸ್ ಡಿ ಶಶಿಧರ ಅವರು ರೆಕಾರ್ಡ್ ರೂಮ್ ನಲ್ಲಿ ಇಲಿಗಳ ಹಾವಳಿಯ ಬಗ್ಗೆ ಆತಂಕಗೊಂಡಿದ್ದರು. ಆಗ ರೈಟರ್ ಗುರುರಾಜು ಅವರು ತಮ್ಮ ನೆರೆಮನೆಯಿಂದ 6 ತಿಂಗಳ ಹಿಂದೆ ಬೆಕ್ಕು ಒಂದನ್ನು ತಂದಿದ್ದರು. ಅದಕ್ಕೆ ಬೀರಾ ಎಂದು ನಾಮಕರಣ ಮಾಡಲಾಗಿತ್ತು. ಅದಕ್ಕೆ ಹಾಲು, ಅನ್ನ, ಹಾಗೂ ಆಗಾಗ ಚಿಕನ್ ತುಂಡುಗಳನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ ಬೀರಾ ಇಲಿಗಳನ್ನು ಹಿಡಿಯುತ್ತದೆ. ಗ್ರಾಮೀಣ ಭಾಗದ ಪೊಲೀಸ್ ಠಾಣೆಯಲ್ಲಿ ಇಲಿಗಳ ಹಾವಳಿ ಸಾಮಾನ್ಯವಾದುದ್ದಾಗಿದ್ದು ಇಲ್ಲಿಯೂ ದಾಖಲೆಗಳನ್ನು ಹಾನಿಗೊಳಿಸಿತ್ತಾ? ಎಂಬ ಪ್ರಶ್ನೆಗೆ ಇನ್ಸ್ ಪೆಕ್ಟರ್ ಅವರ ಉತ್ತರ ಇಲ್ಲ ಎಂಬುದಾಗಿದೆ.

ನಾವು ತುಂಬಾ ಹಳೆಯ ಪ್ರಕರಣಗಳ ಕಡತಗಳನ್ನು ರೆಕಾರ್ಡ್ ರೂಮ್ ಗೆ ಹಾಕುತ್ತೇವೆ. ತುಂಬಾ ಮಹತ್ವದ ಕಡತಗಳನ್ನು ಜೋಪಾನವಾಗಿಡುತ್ತೇವೆ. ಹಾಗಾಗಿ ಇಲಿಗಳ ಕೈಗೆ ಸಿಗುವುದಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಇಲ್ಲಿನ ಪೊಲೀಸ್ ಠಾಣೆಯ ಬೆಕ್ಕು ಬೀರಾ, ಅತ್ಯಂತ ಸ್ನೇಹಯುತವಾಗಿದ್ದು, ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ. ಇಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ಈ ಬೆಕ್ಕು ಮೆಚ್ಚಿನದ್ದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT