ಬೆಂಗಳೂರು: ಶುಕ್ರವಾರ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ 11 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಬೆಂಗಳೂರು ನಗರ ರೈಲು ನಿಲ್ದಾಣ) ನಾಳೆ (ನವೆಂಬರ್ 11) ವಂದೇ ಭಾರತ್ ಎಕ್ಸ್ಪ್ರೆಸ್ (Vande Bharath Express) ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ ನಾಳೆ 11 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಗುರುವಾರ ವೇಳಾಪಟ್ಟಿ ಬದಲಾವಣೆ ಕುರಿತು ಸಂದೇಶಗಳನ್ನು ಸ್ವೀಕರಿಸಿದ್ದು, ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ವಿಶ್ವಮಾನವ ಎಕ್ಸ್ಪ್ರೆಸ್ ಹತ್ತಬೇಕಿದ್ದ ಉತ್ತರಹಳ್ಳಿ ನಿವಾಸಿ ಲಿಖಿತಾ ಅವರಿಗೆ ರೈಲನ್ನು ಮೈಸೂರಿನಿಂದ ಹಾಸನ ಕಡೆಗೆ ತಿರುಗಿಸಲಾಗಿದೆ ಎಂಬ ಸಂದೇಶ ಬಂದಿದೆ. ನವೆಂಬರ್ 7 ರಂದು ತಾನು ಬುಕ್ ಮಾಡಿದ್ದ ಟಿಕೆಟ್ ಅನ್ನು ರದ್ದುಗೊಳಿಸಿದಾಗ 100 ರೂಪಾಯಿ ಶುಲ್ಕ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬದಲಾವಣೆಗಳಿಂದಾಗಿ ತಮ್ಮ ಪ್ರಯಾಣವನ್ನು ಬಿಟ್ಟುಬಿಡುವವರಿಗೆ ಪ್ರಯಾಣ ದರವನ್ನು ಮರುಪಾವತಿಸಲಾಗುವುದು ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಯಾವೆಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ:
ಕಣ್ಣೂರು-ಕೆಎಸ್ಆರ್ ಎಕ್ಸ್ಪ್ರೆಸ್ ರೈಲು
ಅರಸೀಕೆರೆ-ಕೆಎಸ್ಆರ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು
ಕೋಲಾರ-ಯಶವಂತಪುರ ಡೆಮು ಎಕ್ಸ್ಪ್ರೆಸ್ ರೈಲು
ಮೈಸೂರು-ನಾಯಂಡಹಳ್ಳಿ ಮೆಮು ಎಕ್ಸ್ಪ್ರೆಸ್ ರೈಲು
ಹಿಂದೂಪುರ-ಯಶವಂತಪುರ ಮೆಮು ಎಕ್ಸ್ಪ್ರೆಸ್ ರೈಲು
ಮಾರಿಕುಪ್ಪಂ-ಕಂಟೋನ್ಮೆಂಟ್ ಮೆಮು ಎಕ್ಸ್ಪ್ರೆಸ್ ರೈಲು
ಕೆಎಸ್ಆರ್-ತುಮಕೂರು ಮೆಮು ಎಕ್ಸ್ಪ್ರೆಸ್ ರೈಲು
ಹಾಸನ-ಕೆಎಸ್ಆರ್ ಡೆಮು ಎಕ್ಸ್ಪ್ರೆಸ್ ರೈಲು
ಕೆಎಸ್ಆರ್-ವೈಟ್ಫೀಲ್ಡ್ ಮೆಮು ಎಕ್ಸ್ಪ್ರೆಸ್ ರೈಲು
ಮೈಸೂರು-ಕೆಎಸ್ಆರ್ ಮೈಸೂರು ಮೆಮು ಎಕ್ಸ್ಪ್ರೆಸ್ ರೈಲು
ಕುಪ್ಪಂ-ಬೆಂಗಳೂರು ಮೆಮು ಎಕ್ಸ್ಪ್ರೆಸ್ ರೈಲು
ಇದನ್ನೂ ಓದಿ: ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ಯಾವ ಸಮಯಕ್ಕೆ ಏನು ಕಾರ್ಯಕ್ರಮ, ಎಲ್ಲೆಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಮಾಹಿತಿ...
ಮಾರ್ಗ ಬದಲಾವಣೆ
11.11.2022 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿದ್ದೂರು, ರಾಮನಗರ, ರಾಮನಗರ, ಸ್ಕಿಪ್ಪಿಂಗ್ ನಿಲ್ದಾಣಗಳಲ್ಲಿ ಹಾಸನ ಮತ್ತು ಅರಸೀಕೆರೆ ನಿಲ್ದಾಣದ ಮೂಲಕ ಸಂಚರಿಸಲು ಮಾರ್ಗ ಬದಲಿಸಲಾಗಿದೆ. ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು ಮತ್ತು ತಿಪಟೂರು ನಿಲ್ದಾಣ.