ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 
ರಾಜ್ಯ

ಪಾದಯಾತ್ರೆಯಿಂದ ಆಯಾಸವಾಗಿಲ್ಲ, ಜನರ ಶಕ್ತಿ ನನ್ನನ್ನು ಕರೆದುಕೊಂಡು ಹೋಗುತ್ತಿದೆ: ಮಂಡ್ಯದಲ್ಲಿ ರಾಹುಲ್ ಗಾಂಧಿ

ಎರಡು ದಿನಗಳ ವಿರಾಮದ ನಂತರ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಗುರುವಾರ 25 ಕಿ.ಮೀಗೂ ಹೆಚ್ಚು ಕಾಲ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಾದಯಾತ್ರೆ ಸುಲಭದ ಮಾತಲ್ಲ ಎಂದರು.

ಮಂಡ್ಯ: ಎರಡು ದಿನಗಳ ವಿರಾಮದ ನಂತರ ಆರಂಭವಾದ ಭಾರತ್ ಜೋಡೋ ಯಾತ್ರೆಯಲ್ಲಿ ಗುರುವಾರ 25 ಕಿ.ಮೀಗೂ ಹೆಚ್ಚು ಕಾಲ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಾದಯಾತ್ರೆ ಸುಲಭದ ಮಾತಲ್ಲ ಎಂದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಬೆಳಗ್ಗೆ ವಾಕಿಂಗ್ ಆರಂಭಿಸುವ ವ್ಯಕ್ತಿ ಫ್ರೆಶ್ ಆಗಿದ್ದು, ಸಂಜೆಯಾಗುತ್ತಿದ್ದಂತೆ ಸುಸ್ತಾಗುತ್ತಾನೆ. ಆದರೆ, ಈ ಯಾತ್ರೆಯಲ್ಲಿ ನಾನು

ವಿಚಿತ್ರವಾದದ್ದನ್ನು ಗಮನಿಸುತ್ತಿದ್ದೇನೆ. ದಿನ ಕಳೆದಂತೆ, ನಾನು ಕಡಿಮೆ ದಣಿದಿದ್ದೇನೆ ಮತ್ತು ಕೊನೆಯ ಹಂತಗಳು ಇನ್ನಷ್ಟು ಸುಲಭವಾಗಿವೆ. ಕೆಲವು ದಿನಗಳಿಂದ ನಾನು ಈ ಬಗ್ಗೆ ಯೋಚಿಸುತ್ತಿದ್ದೆ. ಇದು ನನಗೆ ಅರ್ಥವಾಗದ ನಿಗೂಢವಾಗಿತ್ತು... ಸಂಜೆ ಏಕೆ ಕಡಿಮೆ ಆಯಾಸವಾಗುತ್ತಿತ್ತು ಎಂಬುದನ್ನು ಯೋಚಿಸಿದ ಬಳಿಕ, ನಾನು ನನ್ನ ಸ್ವಂತ ಶಕ್ತಿಯನ್ನು ಬಳಸುತ್ತಿಲ್ಲ ಎಂದು ತಿಳಿಯಿತು. ನಾನು ಕರ್ನಾಟಕದ ಜನರ ಶಕ್ತಿಯನ್ನು ಬಳಸುತ್ತಿದ್ದೆ, ಅದಕ್ಕಾಗಿಯೇ ನನಗೆ ಆಯಾಸ ಕಡಿಮೆಯಾಗಿದೆ' ಎಂದು ಅವರು ಹೇಳಿದರು.

'ಒಡೆದ ಕುಟುಂಬ ಹೇಗೆ ಯಶಸ್ವಿಯಾಗುವುದಿಲ್ಲವೋ ಹಾಗೆಯೇ ಒಡೆದ ದೇಶವೂ ಯಶಸ್ವಿಯಾಗುವುದಿಲ್ಲ. ಕುಟುಂಬವನ್ನು ವಿಭಜಿಸುವ ಯಾರಾದರೂ ಕುಟುಂಬದ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ. ಅದೇ ರೀತಿ, ದೇಶವನ್ನು ವಿಭಜಿಸುವ ಯಾರಾದರೂ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾರೆ' ಎಂದು ಹೇಳಿದರು.

ಮೂವರು ಮಹಿಳೆಯರು ಅಳುತ್ತಾ ತಮ್ಮ ಗಂಡಂದಿರ ಬಗ್ಗೆ ನನ್ನೊಂದಿಗೆ ಮಾತನಾಡಿದರು ಎಂಬುದನ್ನು ನೆನಪಿಸಿಕೊಂಡ ರಾಹುಲ್, 'ಒಬ್ಬ ಮಹಿಳೆ ತನ್ನ ಪತಿ ರೈತ, ಸಾಲದಿಂದಾಗಿ ಒಂದು ದಿನ ಹೊಲಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡರು. ಅವರು ಶೇ 24ರಷ್ಟು ಬಡ್ಡಿಗೆ ಸಾಲ ಪಡೆದಿದ್ದರು ಎಂದರು. ಇದು ಯಾವ ರೀತಿಯ ದೇಶ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ, ಶ್ರೀಮಂತರಿಗೆ ಶೇ 6 ರಷ್ಟು ಬಡ್ಡಿಗೆ ಸಾಲ ಪಡೆಯಲು ಅವಕಾಶವಿದೆ ಮತ್ತು ರೈತರಿಗೆ ಶೇ 24ಕ್ಕೆ ಸಾಲ ಪಡೆಯಬೇಕು. ಎರಡನೇ ಅತ್ಯಂತ ಶ್ರೀಮಂತರು ಭಾರತೀಯರು ಮತ್ತು ಹೆಚ್ಚಿನ ಸಂಖ್ಯೆಯ ಬಡವರು ಕೂಡ ಭಾರತೀಯರು ಹೇಗೆ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT