ರಾಜ್ಯ

ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ; ನೀರಿನಲ್ಲಿ ಮುಳುಗಿ ಇಬ್ಬರ ಸಾವು

Srinivasamurthy VN

ಹಾಸನ: ರಾಜ್ಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ದುರಂತ ಸರಣಿ ಮುಂದುವರೆದಿದ್ದು, ಇಂದು ಹಾಸನದಲ್ಲಿ ಈಜಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

ಗುರುವಾರ ರಾತ್ರಿ ಹಾಸನದ ಅರಸೀಕೆರೆ ತಾಲೂಕಿನ ವಡಗೇರಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಈಜಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 

ಮೃತರನ್ನು ಪ್ರವೀಣ್ (27 ವರ್ಷ) ಮತ್ತು ನಾಗರಾಜ್ (31 ವರ್ಷ) ಎಂದು ಗುರುತಿಸಲಾಗಿದೆ. ಗಣೇಶ ಮೆರವಣಿಗೆಯ ನಂತರ ಗಣೇಶ ಮೂರ್ತಿಯ ವಿಸರ್ಜಿಸಿದ ಬಳಿಕ ಇಬ್ಬರೂ ಈಜುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆದು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. 

ದುರದೃಷ್ಟವಶಾತ್ ಬೆಂಗಳೂರಿನಿಂದ ಬಂದಿದ್ದ ನಾಗರಾಜ್ ಅವರ ಅಣ್ಣ ಮಧು ಎಂಬಾತ ಶುಕ್ರವಾರ ಆಸ್ಪತ್ರೆಯಲ್ಲಿ ಮೃತ ಸಹೋದರನನ್ನು ನೋಡುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಗ್ರಾಮಸ್ಥರ ಪ್ರಕಾರ, ಮೃತ ನಾಗರಾಜ್ ಮತ್ತು ಪ್ರವೀಣ್ ಗ್ರಾಮದ ಮುಖಂಡರ ಎಚ್ಚರಿಕೆಯನ್ನು ಲೆಕ್ಕಿಸದೆ ವಿಗ್ರಹವನ್ನು ಮುಳುಗಿಸಿದ ನಂತರ ತುಂಬಿದ ಹಳ್ಳಕ್ಕೆ ಹಾರಿದ್ದಾರೆ. ಈ ವೇಳೆ ಆಯತಪ್ಪಿ ನಿಯಂತ್ರಣ ಸಿಗದೇ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಜನರು ಅವರನ್ನು ರಕ್ಷಿಸಲು ಮುಂದಾದರಾದರೂ ಅದು ಸಾಧ್ಯವಾಗಲಿಲ್ಲ. 
 

SCROLL FOR NEXT