ಸಾಂದರ್ಭಿಕ ಚಿತ್ರ 
ರಾಜ್ಯ

ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ: ಮೂರು ಕಡೆ ಮಹಿಳೆಯರ ಸರ ಕದ್ದ ಖದೀಮರು

ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದ್ದು ಶುಕ್ರವಾರ ಮೂವರು ಮಹಿಳೆಯರಿಂದ ದುಷ್ಕರ್ಮಿಗಳು ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದ್ದು ಶುಕ್ರವಾರ ಮೂವರು ಮಹಿಳೆಯರಿಂದ ದುಷ್ಕರ್ಮಿಗಳು ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇಂದಿರಾನಗರ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 50 ನಿಮಿಷಗಳ ಅಂತರದಲ್ಲಿ ಎರಡು ಸರಗಳ್ಳತನ ಮತ್ತು ದರೋಡೆ ಪ್ರಕರಣಗಳು ವರದಿಯಾಗಿವೆ. ಈ ಮೂರೂ ಪ್ರಕರಣಗಳಲ್ಲಿ ಒಂದೇ ಗ್ಯಾಂಗ್ ಶಾಮೀಲಾಗಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೊದಲ ಘಟನೆಯು ಇಂದಿರಾನಗರ 7ನೇ ಕ್ರಾಸ್‌ನಲ್ಲಿ ರಾತ್ರಿ 8.42ಕ್ಕೆ ನಡೆದಿದೆ. ಸಮೀನಾ ಕೌಸರ್ (55) ಎಂಬುವವರ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ. 

ಕೌಸರ್ ತಮ್ಮ ತಾಯಿಯನ್ನು ಭೇಟಿ ಮಾಡಲು ಸಹೋದರನ ಮನೆಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಸರ ಕಸಿದುಕೊಂಡಿದ್ದಾರೆ. 

 “ನಾನು ಮೊದಲ ಮಹಡಿಗೆ ಹೋಗಿ ಡೋರ್‌ಬೆಲ್ ಬಾರಿಸಿ ಕಾಯುತ್ತಿರುವಾಗ, ಮಾಸ್ಕ್ ಧರಿಸಿದ್ದ 25-27 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಚೂರಿ ತೋರಿಸಿ ಬೆದರಿಕೆ ಹಾಕಿದ. ಗೇಟ್ ನಿಂದಲೇ ಆತ ನನ್ನನ್ನು ಹಿಂಬಾಲಿಸಿದ್ದಾನೆ. ಆದರೆ, ನನಗೆ ತಿಳಿದಿರಲಿಲ್ಲ. ಚೂರಿಸಿದ ವ್ಯಕ್ತಿ ಸರ ಕೊಡುವಂತೆ ಕೇಳಿದ. ಕೊಡದಿದ್ದರೆ ಸಾಯಿಸುವುದಾಗಿ ಹೇಳಿದ. ಕೂಡಲೇ ಬೆದರಿದ ನಾನು ಸರ ಹಾಗೂ ಉಗುರವನ್ನು ಕೊಟ್ಟೆ ಎಂದು ಕೌಸರ್ ಹೇಳಿದ್ದಾರೆ. 

ಇನ್ನು ಮತ್ತೊಂದು ಘಟನೆ ಇಂದಿರಾ ನಗರದ 6ನೇ ಕ್ರಾಸ್ ಬಳಿ ನಡೆದಿದೆ. ಮನೆಯ ಹೊರಗೆ ರಾತ್ರಿ 9.20ರ ಸುಮಾರಿಗೆ ಓಡಾಡಿಕೊಂಡಿದ್ದ 65 ವರ್ಷದ ಮಹಿಳೆ ಲಕ್ಷ್ಮೀ ದೇವಿ ಎಂಬುವವರ ಚಿನ್ನದ ಸರ ಕಳ್ಳತನವಾಗಿದೆ. 

ಕತ್ತಿ ಹಿಡಿದು ಬಂದ ದುಷ್ಕರ್ಮಿಗಳು ಮಹಿಳೆಯ ಮಂಗಳಸೂತ್ರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ 50 ಗ್ರಾಂ ತೂಕದ ಸರ ಕಸಿದುಕೊಂಡು ಆಕೆಯನ್ನು ತಳ್ಳಿ ಪರಾರಿಯಾಗಿದ್ದಾರೆ. ಮಹಿಳೆಯ ಕುತ್ತಿಗೆಯಲ್ಲಿ ಗಾಯಗಳಾಗಿದೆ. 

ರಾಮಮೂರ್ತಿನಗರದಲ್ಲಿ ರಾತ್ರಿ 8.45ರ ಸುಮಾರಿಗೆ ದುಷ್ಕರ್ಮಿಗಳು ತಮ್ಮ ಮನೆಯ ಮುಂದೆ ನಿಂತಿದ್ದ ಮಗುವಿಗೆ ಆಹಾರ ತಿನ್ನಿಸುತ್ತಿದ್ದ ಬಾಲಗೌರಿ (33) ಎಂಬುವರಿಂದ 35 ಗ್ರಾಂ ಚಿನ್ನದ ಸರವನ್ನು ದೋಚಿದ್ದಾರೆ. ಈ ಘಟನೆಗಳ ಹಿಂದೆ ಒಂದೇ ಗ್ಯಾಂಗ್‌ನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. 

ಘಟನೆ ಬಳಿಕ ಹೇಳಿಕೆ ನೀಡಿರುವ ಲಕ್ಷ್ಮೀದೇವಿ ಅವರ ಪುತ್ರ ಹರಿಪ್ರಸಾದ್ ಅವರು ಇಂದಿರಾನಗರದಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ. 

ಈ ಪ್ರದೇಶವನ್ನು ಐಷಾರಾಮಿ ಪ್ರದೇಶವೆಂದು ಕರೆಯಲಾಗುತ್ತದೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಅಧಿಕಾರಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯೇ ಪರಿಸ್ಥಿತಿ ತುಂಬಾ ಭಯಾನಕವಾಗಿದ್ದರೆ, ನಗರದ ಇತರ ಪ್ರದೇಶಗಳ ಸ್ಥಿತಿ ಏನು? ಪೊಲೀಸರು ಗಸ್ತು ಹೆಚ್ಚಿಸಬೇಕು, ವಿಶೇಷವಾಗಿ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಗಸ್ತು ತಿರಗಬೇಕೆಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಮಾತನಾಡಿ, ಇಲ್ಲಿ ಇಂತಹ ಅಪರಾಧ ಇದೇ ಮೊದಲಲ್ಲ. ಘಟನೆ ನಡೆದಾಗ ಸ್ಥಳದಲ್ಲಿ ಕಾಣಸಿಕೊಳ್ಳತ್ತಾರೆ. ಒಂದು ವಾರ, ಕೆಲ ದಿನಗಳ ಕಾಲ ಗಸ್ತು ತಿರುಗಿ ನಿಲ್ಲಿಸಿ ಬಿಡುತ್ತಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT