ಮಕ್ಕಳೊಂದಿಗೆ ಆಡುತ್ತಾ ಮತ್ತು ಮೇಯುತ್ತಾ ಕಂಡುಬಂದ ಆನೆ ಮರಿ 
ರಾಜ್ಯ

ಬುಡಕಟ್ಟು ಜನಾಂಗದ ಮಕ್ಕಳಿಗೆ ಈ ಆರು ತಿಂಗಳ ಪುಟ್ಟ ಆನೆ ಮರಿಯೇ ಆಟಕ್ಕೆ ಜೊತೆಗಾರ!

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷದ ನಡುವೆ, ಬಿಳಿಗಿರಿರಂಗನ ಬೆಟ್ಟ ಸಮೀಪದ ಚಾಮರಾಜನಗರದ ಪುರಾಣಿಪೋಡು ಗ್ರಾಮದಲ್ಲಿ ಆರು ತಿಂಗಳ ಗಂಡು ಆನೆಯೊಂದು ಬುಡಕಟ್ಟು ಜನಾಂಗದ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿದ ಹೃದಯಸ್ಪರ್ಶಿ ಕಥೆ ಇಲ್ಲಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷದ ನಡುವೆ, ಬಿಳಿಗಿರಿರಂಗನ ಬೆಟ್ಟ ಸಮೀಪದ ಚಾಮರಾಜನಗರದ ಪುರಾಣಿಪೋಡು ಗ್ರಾಮದಲ್ಲಿ ಆರು ತಿಂಗಳ ಗಂಡು ಆನೆಯೊಂದು ಬುಡಕಟ್ಟು ಜನಾಂಗದ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿದ ಹೃದಯಸ್ಪರ್ಶಿ ಕಥೆ ಇಲ್ಲಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆಯ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಮಾನವ ವಾಸಕ್ಕೆ ಹೊಂದಿಕೊಂಡಿರಬಹುದು. ಕಾಡು ಪ್ರಾಣಿಯು ಮನುಷ್ಯರೊಂದಿಗೆ ಸ್ನೇಹ ಬೆಳೆಸುವುದು ಹಾಗೂ ಅವರಿಂದ ಕಾಳಜಿ ಮತ್ತು ಗಮನವನ್ನು ಬಯಸುವುದು ಸಾಮಾನ್ಯವಲ್ಲ ಎನ್ನುತ್ತಾರೆ.

'ಭಾನುವಾರ ಈ ಘಟನೆ ನಮಗೆ ತಿಳಿಯಿತು. ಯಳಂದೂರು ತಾಲೂಕಿನ ಬುಡಕಟ್ಟು ಜನಾಂಗದವರ ವ್ಯಾಪ್ತಿಯ ಗ್ರಾಮವೊಂದರ ಶಾಲಾ ಪ್ರದೇಶದಲ್ಲಿ ಈ ಆನೆಯ ಮರಿ ಓಡಾಡುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ ಮಕ್ಕಳು ಮತ್ತು ವಯಸ್ಕರು ಆಟವಾಡುತ್ತಾ ಅದಕ್ಕೆ ತಿನ್ನಿಸುತ್ತಿರುವ ದೃಶ್ಯ ಕಂಡುಬಂದಿದೆ' ಎಂದು ಬಿಳಿಗಿರಿರಂಗನ ಬೆಟ್ಟದ ಪ್ರಭಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.

'ಕರುವಿಗೆ ಬಾಳೆಹಣ್ಣು ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆನೆ ಮರಿ ತುಂಬಾ ಸಂತೋಷವಾಗಿದ್ದರೂ, ಅಂತಹ ಸಾಮೀಪ್ಯವು ಅಪರೂಪ' ಎಂದು ಚಾಮರಾಜನಗರದ ಅರಣ್ಯಾಧಿಕಾರಿಯೊಬ್ಬರು ಹೇಳಿದರು.

ತನ್ನ ತಾಯಿ ಆನೆಯೊಂದಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಅರಣ್ಯಾಧಿಕಾರಿಗಳು ಆನೆಯ ಮರಿಯನ್ನು ಕರೆದೊಯ್ದಿದ್ದಾರೆ.
ಸಿಎಂ ಸಭೆ ರದ್ದು

ಒಂದೂವರೆ ವರ್ಷಗಳ ನಂತರ ಸೆಪ್ಟೆಂಬರ್ 5 ರಂದು ನಡೆಯಬೇಕಿದ್ದ ರಾಜ್ಯ ವನ್ಯಜೀವಿ ಮಂಡಳಿಯ ಬಹುನಿರೀಕ್ಷಿತ ಸಭೆಯನ್ನು ಸಿಎಂ ರದ್ದುಗೊಳಿಸಿದ್ದಾರೆ. ಹೆಸರಘಟ್ಟವನ್ನು ಹುಲ್ಲುಗಾವಲು ಎಂದು ಘೋಷಿಸುವುದು, ಎಂಎಂ ಹಿಲ್ಸ್ ಮರುಮೌಲ್ಯಮಾಪನ ಮತ್ತಿತರ ವಿಷಯಗಳು ಸಭೆಯ ಅಜೆಂಡಾದಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ