ಸಾಂದರ್ಭಿಕ ಚಿತ್ರ 
ರಾಜ್ಯ

ಗುಣಮಟ್ಟವಿಲ್ಲದ ಮಾರ್ಬಲ್ ಪೂರೈಕೆ: 18.28 ಲಕ್ಷ ರೂ. ಪಾವತಿಸುವಂತೆ ರಾಜಸ್ಥಾನ ಮೂಲದ ಕಂಪನಿಗೆ ಗ್ರಾಹಕ ಆಯೋಗ ನಿರ್ದೇಶನ

ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18.28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ

ಬೆಂಗಳೂರು: ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18. 28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ. 

ಆರ್‌ಕೆಎಂಪಿಎಲ್‌ನ ಕಡೆಯಿಂದ ಸೇವೆಯ ಕೊರತೆ ಮತ್ತು ಅನ್ಯಾಯದ ವಹಿವಾಟು ಆಗಿರುವುದನ್ನು ಪರಿಗಣಿಸಿದ ಆಯೋಗ ದೂರುದಾರರಾದ ಜ್ಞಾನಜ್ಯೋತಿ ನಗರದ  ಟಿ ಪರಮಶಿವ ಅವರಿಗೆ  8.18 ಲಕ್ಷ ರೂ.ಗಳ ಮೊತ್ತವನ್ನು ಹಿಂದಿರುಗಿಸುವಂತೆ ಸೂಚಿಸಿತು. ಅಲ್ಲದೇ ಮಾರ್ಬಲ್ ಗಳ ಗುಣಮಟ್ಟವನ್ನು ಮೇಲ್ದರ್ಜೇರಿಸಲು ದೂರುದಾರ ವೆಚ್ಚ ಮಾಡಿದ 5 ಲಕ್ಷ ರೂ. ಭರಿಸುವಂತೆಯೂ ಕಂಪನಿಗೆ ಸಲಹೆ ನೀಡಿದೆ. ದೂರುದಾರರಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿ ಮತ್ತು ವ್ಯಾಜ್ಯ ವೆಚ್ಚ 10,000 ರೂಪಾಯಿ ಪಾವತಿಸಲು ಸೂಚಿಸಿದೆ. 

ದೋಷಪೂರಿತ ಮಾರ್ಬಲ್‌ಗಳನ್ನು ಬದಲಾಯಿಸುವುದಾಗಿ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಆರ್ ಕೆಎಂಪಿಎಲ್ ವಿಫಲವಾಗಿದೆ ಅಥವಾ ಪಾವತಿಸಿದ ಹಣವನ್ನು ಹಿಂದಿರುಗಿಸಿಲ್ಲ ಎಂದು  ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ಬಿ.ದೇವರಾಜು ಮತ್ತು ವಿ.ಅನುರಾಧ ಅವರನ್ನೊಳಗೊಂಡ ಆಯೋಗ ಹೇಳಿತು. ದೂರುದಾರರು ಖುದ್ದಾಗಿ ರಾಜಸ್ಥಾನದ ಕಿಶನ್‌ಗಂಜ್‌ಗೆ ಭೇಟಿ ನೀಡಿದಾಗ ಉತ್ತಮ ಗುಣಮಟ್ಟದ ಮಾರ್ಬಲ್‌ಗಳನ್ನು ತೋರಿಸಿದ್ದಾರೆ ಆದರೆ ಅವರು ಕಳಪೆ ಗುಣಮಟ್ಟದ ಮಾರ್ಬಲ್  ಪೂರೈಸುವ ಮೂಲಕ ಮೋಸ ಮಾಡಲಾಗಿದೆ ಎಂದು ಆಯೋಗ ಹೇಳಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಅಗ್ನಿ ಪರೀಕ್ಷೆಯಲ್ಲಿ ಮೋದಿ ಸರ್ಕಾರ, ಇಂದು ಪಾಸ್ ಆಗುತ್ತಾ ಪ್ರಮುಖ ಮಸೂದೆಗಳು?

'ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ, ಶಾಂತಿ ಒಪ್ಪಂದ ಹತ್ತಿರದಲ್ಲಿದೆ': Donald Trump

'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್-Video

Bengaluru: ಎಲೆಕ್ಟ್ರಾನಿಕ್ ಸಿಟಿಯಲ್ಲಿ 'ಕೃತಕ ಬುದ್ಧಿಮತ್ತೆಯ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ- ಪ್ರಿಯಾಂಕ್ ಖರ್ಗೆ

ರಾಜ್ಯದಲ್ಲಿ ಬರಗಾಲದ ಕರಿನೆರಳು; ಆದರೆ ಸಿಎಂ- ಡಿಸಿಎಂಗೆ ಕುರ್ಚಿ ಕಿತ್ತಾಟದ ತೆವಲು! ಆರ್.ಅಶೋಕ್ ಕಿಡಿ

SCROLL FOR NEXT