ಸಾಂದರ್ಭಿಕ ಚಿತ್ರ 
ರಾಜ್ಯ

ಗುಣಮಟ್ಟವಿಲ್ಲದ ಮಾರ್ಬಲ್ ಪೂರೈಕೆ: 18.28 ಲಕ್ಷ ರೂ. ಪಾವತಿಸುವಂತೆ ರಾಜಸ್ಥಾನ ಮೂಲದ ಕಂಪನಿಗೆ ಗ್ರಾಹಕ ಆಯೋಗ ನಿರ್ದೇಶನ

ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18.28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ

ಬೆಂಗಳೂರು: ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18. 28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ. 

ಆರ್‌ಕೆಎಂಪಿಎಲ್‌ನ ಕಡೆಯಿಂದ ಸೇವೆಯ ಕೊರತೆ ಮತ್ತು ಅನ್ಯಾಯದ ವಹಿವಾಟು ಆಗಿರುವುದನ್ನು ಪರಿಗಣಿಸಿದ ಆಯೋಗ ದೂರುದಾರರಾದ ಜ್ಞಾನಜ್ಯೋತಿ ನಗರದ  ಟಿ ಪರಮಶಿವ ಅವರಿಗೆ  8.18 ಲಕ್ಷ ರೂ.ಗಳ ಮೊತ್ತವನ್ನು ಹಿಂದಿರುಗಿಸುವಂತೆ ಸೂಚಿಸಿತು. ಅಲ್ಲದೇ ಮಾರ್ಬಲ್ ಗಳ ಗುಣಮಟ್ಟವನ್ನು ಮೇಲ್ದರ್ಜೇರಿಸಲು ದೂರುದಾರ ವೆಚ್ಚ ಮಾಡಿದ 5 ಲಕ್ಷ ರೂ. ಭರಿಸುವಂತೆಯೂ ಕಂಪನಿಗೆ ಸಲಹೆ ನೀಡಿದೆ. ದೂರುದಾರರಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿ ಮತ್ತು ವ್ಯಾಜ್ಯ ವೆಚ್ಚ 10,000 ರೂಪಾಯಿ ಪಾವತಿಸಲು ಸೂಚಿಸಿದೆ. 

ದೋಷಪೂರಿತ ಮಾರ್ಬಲ್‌ಗಳನ್ನು ಬದಲಾಯಿಸುವುದಾಗಿ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಆರ್ ಕೆಎಂಪಿಎಲ್ ವಿಫಲವಾಗಿದೆ ಅಥವಾ ಪಾವತಿಸಿದ ಹಣವನ್ನು ಹಿಂದಿರುಗಿಸಿಲ್ಲ ಎಂದು  ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ಬಿ.ದೇವರಾಜು ಮತ್ತು ವಿ.ಅನುರಾಧ ಅವರನ್ನೊಳಗೊಂಡ ಆಯೋಗ ಹೇಳಿತು. ದೂರುದಾರರು ಖುದ್ದಾಗಿ ರಾಜಸ್ಥಾನದ ಕಿಶನ್‌ಗಂಜ್‌ಗೆ ಭೇಟಿ ನೀಡಿದಾಗ ಉತ್ತಮ ಗುಣಮಟ್ಟದ ಮಾರ್ಬಲ್‌ಗಳನ್ನು ತೋರಿಸಿದ್ದಾರೆ ಆದರೆ ಅವರು ಕಳಪೆ ಗುಣಮಟ್ಟದ ಮಾರ್ಬಲ್  ಪೂರೈಸುವ ಮೂಲಕ ಮೋಸ ಮಾಡಲಾಗಿದೆ ಎಂದು ಆಯೋಗ ಹೇಳಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT