ಸಂಗ್ರಹ ಚಿತ್ರ 
ರಾಜ್ಯ

ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಮಹಿಳಾ ಅಧಿಕಾರಿಯೊಂದಿಗಿನ ಅನುಚಿತ ವರ್ಚನೆಯಿಂದ ವಜಾಗೊಂಡಿದ್ದರು: ಐ ಎಎಫ್

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುಪಡೆಯ ತಾಂತ್ರಿಕ ಕಾಲೇಜಿನ (ಎಎಫ್ಟಿಸಿ) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು ಭಾರತೀಯ ವಾಯುಪಡೆ ತಿಳಿಸಿದೆ.

ನವದೆಹಲಿ: ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುಪಡೆಯ ತಾಂತ್ರಿಕ ಕಾಲೇಜಿನ (ಎಎಫ್ಟಿಸಿ) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು ಭಾರತೀಯ ವಾಯುಪಡೆ ತಿಳಿಸಿದೆ.

ಮಹಿಳಾ ತರಬೇತಿ ಅಧಿಕಾರಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆಂದು ದೂರುದಾಖಲಾದ ಬಳಿಕ ಅಂಕಿತ್ ಕುಮಾರ್ ಅವರನ್ನು ಸೆಪ್ಟಂಬರ್ 20, 2022 ರಂದು ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಜೂನ್ 30 ರಂದು ಯುಟಿಎಫ್‌ಒ ವಿರುದ್ಧ ಸಹ ಮಹಿಳಾ ಟ್ರೈನಿ ಅಧಿಕಾರಿಯ ದೂರಿನ ನಂತರ ಸ್ಥಾಪಿಸಲಾದ ಆಂತರಿಕ ವಿಚಾರಣೆ (COI) ಮಾಡಿದ ಶಿಫಾರಸುಗಳ ಪರಿಣಾಮವಾಗಿ ತರಬೇತಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

ಯುಟಿಎಫ್‌ಒ ಕೆಲವು ದುರ್ನಡತೆಯ ಕೃತ್ಯಗಳನ್ನು ಮಾಡಿರುವುದು ಎಂದು ದೃಢಪಟ್ಟಿದೆ. ಈ ವಿಷಯದ ಬಗ್ಗೆ ಸ್ಥಾಪಿತ ಕಾರ್ಯವಿಧಾನದ ಪ್ರಕಾರ, ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಅನುಮೋದಿಸುವ ಮೊದಲು ವಿಚಾರಣೆಯ ಪ್ರಕ್ರಿಯೆಗಳನ್ನು ಅನೇಕ ಹಂತಗಳಲ್ಲಿ ಸರಿಯಾಗಿ ಪರಿಶೀಲಿಸಲಾಗಿದೆ ಎಂದು ವಾಯುಪಡೆ ಹೇಳಿದೆ.

ಅಸ್ತಿತ್ವದಲ್ಲಿರುವ ನಿಯಮ ಪ್ರಕಾರ, ಅಂಕಿತ್ ಝಾ ಅವರ ಪೋಷಕರಿಗೆ ಈ ದುರದೃಷ್ಟಕರ ಘಟನೆಯ ಸುದ್ದಿಯನ್ನು ನವದೆಹಲಿಯಲ್ಲಿ ತಿಳಿಸಲು ಐಎಎಫ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಸೆಪ್ಟೆಂಬರ್ 23ರಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಯುಟಿಎಫ್‌ಒ ನ ಸಾವಿಗೆ ಕಾರಣ ಬಗ್ಗೆ ವಾಯುಪಡೆಯಿಂದ ಆಂತರಿಕ ವಿಚಾರಣೆ ನಡೆಯುತ್ತಿದೆ ಎಂದು ಅದು ಹೇಳಿದೆ. ಸೆಪ್ಟೆಂಬರ್ 24 ರಂದು, ಅವರ ಸಂಬಂಧಿಕರು ಎಎಫ್‌ಟಿಸಿ ಗೆ ಭೇಟಿ ನೀಡಿದರು. ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.

ಭಾರತೀಯ ವಾಯುಪಡೆಯು ದುರದೃಷ್ಟಕರ ಜೀವಹಾನಿಗೆ ಸಂತಾಪ ವ್ಯಕ್ತಪಡಿಸುತ್ತದೆ. ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸುತ್ತದೆ. ಈ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಐಎಎಫ್ ಸಹಕಾರ ನೀಡುತ್ತಿದೆ.

“ಯುಟಿಎಫ್ಒ ಸಾವಿಗೆ ಕಾರಣವಾದ ಸನ್ನಿವೇಶಗಳನ್ನು ಸ್ಥಾಪಿಸಲು ಐಎಎಫ್ನಿಂದ ವಿಚಾರಣೆಯ ನ್ಯಾಯಾಲಯವು ನಡೆಯುತ್ತಿದೆ” ಎಂದು ಅದು ಹೇಳಿದೆ, ಈ ವಿಷಯದ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಐಎಎಫ್ ಸಹಕರಿಸುತ್ತಿದೆ ಎಂದು ಅದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT