ಹಂಪಿಯ ಮಹಾನವಮಿ ದಿಬ್ಬ 
ರಾಜ್ಯ

'ದಸರಾ ಜನ್ಮಸ್ಥಳವಾದ ಐತಿಹಾಸಿಕ ಹಂಪಿ ಮಹಾನವಮಿ ದಿಬ್ಬದ ಮೂಲ ಸ್ಮಾರಕ ನಿರ್ಲಕ್ಷ್ಯ'

ನಾಡಹಬ್ಬ ಎಂದೇ ಖ್ಯಾತವಾಗಿರುವ ಮೈಸೂರು ದಸರಾ ಆರಂಭವಾಗಿದ್ದು ಹಂಪಿಯಲ್ಲಿ , ಆದರೆ ಮೂಲ ದಸರಾ ಆರಂಭವಾದ ಮೂಲ ನಿವೇಶನವನ್ನೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಹುಬ್ಬಳ್ಳಿ: ನಾಡಹಬ್ಬ ಎಂದೇ ಖ್ಯಾತವಾಗಿರುವ ಮೈಸೂರು ದಸರಾ ಆರಂಭವಾಗಿದ್ದು ಹಂಪಿಯಲ್ಲಿ , ಆದರೆ ಮೂಲ ದಸರಾ ಆರಂಭವಾದ ಮೂಲ ನಿವೇಶನವನ್ನೇ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಮಹಾನವಮಿ ದಿಬ್ಬದ ಸ್ಮಾರಕವನ್ನು ಬೆಳಗಿಸಬೇಕು ಮತ್ತು ಅದರ ಹಿಂದಿನ ವೈಭವದ ಬಗ್ಗೆ ಜಾಗೃತಿ ಫಲಕಗಳನ್ನು ಪ್ರದರ್ಶಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ, 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರಿಂದ ನಿರ್ಮಿಸಲ್ಪಟ್ಟ ಮಹಾನವಮಿ ದಿಬ್ಬವು ರಾಜ ಮತ್ತು ಅವರ ಕುಟುಂಬವು ದಸರಾ ಮೆರವಣಿಗೆಯನ್ನು ವೀಕ್ಷಿಸುವ ಆಕರ್ಷಣೆಯ ಕೇಂದ್ರವಾಗಿತ್ತು.

ರಾಜ ತನ್ನ ಆನೆಯಿಂದ ರಾಜಮನೆತನದ ಇತರ ಸದಸ್ಯರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಈ ಮಹಾನವವಿ ದಿಬ್ಬದ ಮೇಲೆ ಸೇರುತ್ತಿದ್ದರು. ಹಂಪಿಯ ದಸರಾ ಮೆರವಣಿಗೆಯು ಇಂದಿನ ದಸರಾವನ್ನು ಹೋಲುತ್ತಿತ್ತು,

1565 ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ,  ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರಿನ ಒಡೆಯರು, ಮೈಸೂರಿನಲ್ಲಿ ಸಂಪ್ರದಾಯವನ್ನು ಮುಂದುವರೆಸಿದರು, ಇದನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ.

10 ದಿನಗಳ ಕಾಲ ದಸರಾ ನಡೆಯುವ ಮೈಸೂರಿಗೆ ಪ್ರತಿ ವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಹಂಪಿಯ ಪುರಾತನ ಸಂಪ್ರದಾಯವನ್ನು ಜೀವಂತವಾಗಿಡಲು ಸರ್ಕಾರ ನವರಾತ್ರಿಯ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಂಪಿ ಕಾರ್ಯಕರ್ತರು ಹೇಳುತ್ತಾರೆ.

ಹಂಪಿಯ ಮಹಾನವಮಿ ದಿಬ್ಬ ದಸರಾ ಮೂಲ ಸ್ಥಳವಾಗಿರುವುದರಿಂದ ಸರ್ಕಾರ ಗುರುತಿಸಿ ಆಚರಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ವಿಜಯನಗರದ ಅರಸರ ಸಂಪ್ರದಾಯವನ್ನು ಮೈಸೂರು ಅರಸರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದರು.

ಈ ಹಿಂದೆ ದಸರಾ ಸಂದರ್ಭದಲ್ಲಿ ಸ್ಮಾರಕದಲ್ಲಿ ಆಚರಣೆಗಳನ್ನು ಆಯೋಜಿಸಲು ಯೋಜಿಸಲಾಗಿತ್ತು. ಆದರೆ 1513 ರಲ್ಲಿ ನಿರ್ಮಿಸಲಾದ ಸ್ಮಾರಕದ ಸೂಕ್ಷ್ಮ ರಚನೆಯಿಂದಾಗಿ ಇತಿಹಾಸಕಾರರ ಒಂದು ನಿರ್ದಿಷ್ಟ ವಿಭಾಗವು ಈ ಕಲ್ಪನೆಯನ್ನು ವಿರೋಧಿಸಿತು.

ಆದರೆ, ರಾಜ್ಯದಲ್ಲಿ ದಸರಾಕ್ಕೆ ಜನ್ಮ ನೀಡಿದ ಸ್ಮಾರಕವನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡ ಕಾರ್ಯಕ್ರಮಗಳು ಆಗಬೇಕು' ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT