ರಾಜ್ಯ

ಚಿತ್ರದುರ್ಗದ ಮುರುಘಾ ಮಠದ ನೌಕರರಿಗೆ ವೇತನ ನೀಡಲು ಸ್ವಾಮೀಜಿಯ ಸಹಿ ಒಂದು ಚೆಕ್ ಗೆ ಸಾಕೇ, ಹಲವು ಚೆಕ್ ಗಳಿಗೆ ಬೇಕೆ: ಹೈಕೋರ್ಟ್ ಪ್ರಶ್ನೆ

Sumana Upadhyaya

ಬೆಂಗಳೂರು: ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೂ ಮುನ್ನ ನೌಕರರಿಗೆ ಸಂಬಳ ನೀಡಲು ಏನು ಮಾಡುತ್ತಿದ್ದರು ಮತ್ತು ಈಗ ಒಂದೇ ಒಂದು ಚೆಕ್‌ಗೆ ಅವರು ಸಹಿ ಹಾಕಬೇಕೇ ಅಥವಾ ಹಲವು ಚೆಕ್ ಗಳಿಗೆ ಸಹಿ ಹಾಕಬೇಕೆ ಎಂಬ ಬಗ್ಗೆ ಹೇಳಿಕೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಮಠ ಮತ್ತು ಶ್ರೀ ಜಗದ್ಗುರುಗಳ ನಿರ್ವಹಣೆಗೆ ಸಂಬಳ ನೀಡಲು ಮತ್ತು ಇತರ ದೈನಂದಿನ ವೆಚ್ಚಗಳಿಗೆ ಚೆಕ್ ಮತ್ತು ಇತರ ಸಂಬಂಧಿತ ದಾಖಲೆಗಳಿಗೆ ಸಹಿ ಮಾಡಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶ ನೀಡಿದರು. 

ಶಿವಮೂರ್ತಿ ಮುರುಘಾ ಶರಣರು

ಮಠದಲ್ಲಿರುವ 3,500 ಕ್ಕೂ ಹೆಚ್ಚು ಉದ್ಯೋಗಿಗಳ ವೇತನ ವಿತರಣೆಗೆ ಚೆಕ್‌ಗೆ ಸಹಿ ಹಾಕಲು ಅರ್ಜಿದಾರರಿಗೆ ಅವಕಾಶ ನೀಡಬೇಕು ಎಂದು ಸ್ವಾಮೀಜಿ ಪರ ವಕೀಲರು ವಾದಿಸಿದರು. ಇತರರಿಗೆ ಸಹಿ ಮಾಡಲು ಅಧಿಕಾರವನ್ನು ನೀಡಲು ಟ್ರಸ್ಟ್ ಬೈಲಾದಲ್ಲಿ ಯಾವುದೇ ಅವಕಾಶವಿಲ್ಲ. ಪವರ್ ಆಫ್ ಅಟಾರ್ನಿಯನ್ನು ನೇಮಿಸುವ ಅಧಿಕಾರವೂ ಇಲ್ಲ. ಮಠಾಧೀಶರು ಒಬ್ಬರೇ ಸಹಿ ಹಾಕಿದ್ದಾರೆ, ಕಳೆದ ಎರಡೂವರೆ ತಿಂಗಳಿನಿಂದ ನೌಕರರು ಸಂಬಳವಿಲ್ಲದೆ ಇದ್ದಾರೆ ಎಂದು ಸ್ವಾಮೀಜಿ ಪರ ವಕೀಲರು ವಾದಿಸಿದರು. 

ಸೆಷನ್ಸ್ ನ್ಯಾಯಾಧೀಶರಿಂದ ಮಠಾಧೀಶರ ಮನವಿಯನ್ನು ತಿರಸ್ಕರಿಸಿದ ಬಗ್ಗೆ ರಾಜ್ಯ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನ ಸೆಳೆದರು. ಒಬ್ಬರ ಸಮಸ್ಯೆಯು ಇತರರಿಗೆ ತೊಂದರೆಯಾಗಬಾರದು. ಯಾರೂ ಹಸಿವಿನಿಂದ ಬಳಲಬಾರದು ಎಂದು ನ್ಯಾಯಾಲಯವು ಸಂಬಳವನ್ನು ವಿತರಿಸಲು ಪರಿಹಾರವೇನು ಎಂದು ಮೌಖಿಕವಾಗಿ ಕೇಳಿತು.

“ಮಠಾಧೀಶರು ಏನು ಮಾಡಲು ಉದ್ದೇಶಿಸಿದ್ದಾರೆ ಎಂಬುದನ್ನು ನಮೂದಿಸುವ ಜ್ಞಾಪಕ ಪತ್ರವನ್ನು ಸಲ್ಲಿಸಿ ಮತ್ತು ಅವರ ಬಂಧನಕ್ಕೂ ಮುನ್ನ ಸಂಬಳವನ್ನು ಹೇಗೆ ವಿತರಿಸಲಾಯಿತು ಎಂಬುದನ್ನು ಸೂಚಿಸಿ. ಅಲ್ಲದೆ, ತಿಂಗಳಿಗೆ 200 ಚೆಕ್‌ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಹೇಳಿರುವುದರಿಂದ ಒಂದು ಚೆಕ್‌ಗೆ ಸಹಿ ಸಾಕೇ ಅಥವಾ ಬಹು ಚೆಕ್‌ಗಳಿಗೆ ಸಾಕೇ ಎಂಬುದನ್ನು ಬಹಿರಂಗಪಡಿಸಿ ಎಂದು ನ್ಯಾಯಾಧೀಶರು ಸೇರಿಸಿದರು. ಪ್ರಕರಣದ ವಿಚಾರಣೆಯನ್ನು ಗುರುವಾರದಂದು ರಾಜ್ಯ ಸರಕಾರಿ ಅಭಿಯೋಜಕರಿಗೆ ಸಲ್ಲಿಸುವಂತೆ ಅವರು ಆರೋಪಿಗಳ ಪರ ವಕೀಲರಿಗೆ ಸೂಚಿಸಿದರು.

SCROLL FOR NEXT