ರಾಜ್ಯ

ಶಿವಮೊಗ್ಗ: ನಾಗರ ಹಾವಿಗೆ ಮುತ್ತಿಡಲು ಹೋದ ಯುವಕ, ಮುಂದೆ ಆಗಿದ್ದೇನು? ಈ ವಿಡಿಯೋ ನೋಡಿ!

Vishwanath S

ಶಿವಮೊಗ್ಗ: ವ್ಯಕ್ತಿಯೊಬ್ಬರು ನಾಗರಹಾವಿನೊಂದಿಗೆ ಸರಸವಾಡಲು ಹೋಗಿ ವಿಷಮ ಪರಿಸ್ಥಿತಿಗೆ ಸಿಲುಕಿಕೊಂಡ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಮೀಪದ ಬೊಮ್ಮನಕಟ್ಟೆಯಲ್ಲಿ ಈ ಘಟನೆ ನಡೆದಿದೆ. ನಾಗರಹಾವು ಹಿಡಿಯಲು ಕರೆಬಂದ ನಂತರ ಸ್ಥಳಕ್ಕೆ ಹೋದ ವ್ಯಕ್ತಿ ಅದನ್ನು ಹಿಡಿದಿದ್ದಾರೆ. ಅದರೊಂದಿಗೆ ಆಟವಾಡುತ್ತಾ ಹೆಡೆಗೆ ಮುತ್ತಿಡಲು ಹೋಗಿದ್ದಾರೆ. ಆಗ ಹಾವು ಆತನ ತುಟಿಗೆ ಕಚ್ಚಿದೆ.

ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯಕ್ಷದರ್ಶಿಗಳು ಘಟನೆ ಸಂದರ್ಭ ವಿಡಿಯೋ ಮಾಡಿದ್ದಾರೆ. ಅದನ್ನು ಮಾರ್ಕ್ಸ್ ತೇಜಸ್ವಿ ಎಂಬುವರು ಟ್ವೀಟ್ ಮಾಡಿದ್ದಾರೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಬಹುದು.

SCROLL FOR NEXT