ಸ್ಯಾಂಕಿ ಟ್ಯಾಂಕ್ 
ರಾಜ್ಯ

ಸ್ಯಾಂಕ್ ಟ್ಯಾಂಕ್ ರಸ್ತೆ ಅಗಲೀಕರಣ ವಿರುದ್ಧ ಪ್ರತಿಭಟನೆ ನಡೆಸಿದ ಜಟ್ಕಾ ವಿರುದ್ಧ ಕೇಸು ದಾಖಲೆ ಕಾನೂನುಬಾಹಿರ: ಪರಿಸರವಾದಿಗಳ ಆಕ್ಷೇಪ

ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಜಟ್ಕಾ ಸಂಘಟನೆಗೆ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ, ಹೋರಾಟಗಾರರು ಮತ್ತು ಪರಿಸರವಾದಿಗಳು ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು: ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಜಟ್ಕಾ ಸಂಘಟನೆಗೆ ಪೊಲೀಸರು ನೋಟಿಸ್ ನೀಡಿದ ಬೆನ್ನಲ್ಲೇ, ಹೋರಾಟಗಾರರು ಮತ್ತು ಪರಿಸರವಾದಿಗಳು ಪೊಲೀಸ್ ಇಲಾಖೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಫೆಬ್ರವರಿ 19 ರಂದು ಪರಿಸರ ಜಾಗೃತಿ ಮೂಡಿಸಲು ಮಕ್ಕಳು, ಮಹಿಳೆಯರು ಮತ್ತು ಇತರ ಗುಂಪುಗಳು ಭಾಗವಹಿಸಿದ್ದ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ಪೊಲೀಸ್ ಇಲಾಖೆ  ಕಳೆದ ವಾರ, Jhatkaa.org ಸದಸ್ಯ ಅವಿಜಿತ್ ಮೈಕೆಲ್‌ಗೆ ನೊಟೀಸ್ ನೀಡಿತ್ತು. 

ಸದಾಶಿವನಗರ ಪೊಲೀಸರು ಸೆಕ್ಷನ್ 340 ಮತ್ತು ಇತರವುಗಳ ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ, ಅದು ತಪ್ಪಾದ ನಿರ್ಬಂಧ ಮತ್ತು ಕಾನೂನುಬಾಹಿರ ಎಂದು ಹೇಳುತ್ತದೆ. ನೋಟಿಸ್‌ಗೆ ಆಕ್ಷೇಪಣೆ ಹೇಳಿರುವ ಜೋಸೆಫ್ ಹೂವರ್, ಇದು ಸರ್ಕಾರಿ ಸಂಸ್ಥೆಯಿಂದ ಸಂಪೂರ್ಣ ಹುಚ್ಚುತನ ಮತ್ತು ಸಂಪೂರ್ಣ ದುರಹಂಕಾರದ ವರ್ತನೆಯಾಗಿದೆ ಎಂದರು.

ಸರ್ಕಾರದ ನಿರ್ಧಾರ ತಪ್ಪಾಗಿದ್ದರೂ ಧ್ವನಿಯೆತ್ತುವಂತಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಬೆಳವಣಿಗೆಯನ್ನು ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ನ್ಯಾಯವಾದಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಲೇಖಾ ಅಡವಿ ಹೇಳುತ್ತಾರೆ. ಪರಿಸರವಾದಿ ಡಾ. ಯಲ್ಲಪ್ಪ ರೆಡ್ಡಿ, ಕೆರೆಯ ಸುತ್ತಮುತ್ತಲಿನ ಪರಿಸರ ಮತ್ತು ಜಲ ಸೂಕ್ಷ್ಮತೆಯ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕರ್ತರು ಜಮಾಯಿಸಿದರು.

ಯಾವುದೇ ನಾಗರಿಕ ಸಮಾಜವು ತನ್ನ ಯೋಜನೆಗಳು ಅಥವಾ ನಿರ್ಧಾರದ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ ಎಂಬ ಸಂದೇಶವಾಗಿ ಪೋಲೀಸ್ ನೋಟಿಸ್ ಕಾರ್ಯನಿರ್ವಹಿಸುತ್ತದೆ. ಇದು ಬ್ರಿಟಿಷ್ ರಾಜ್ ವರ್ತನೆಯನ್ನು ತೋರಿಸುತ್ತದೆ ಎಂದು ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್‌ನ ಲಿಯೋ ಸಲ್ಡಾನ್ಹಾ ಅಭಿಪ್ರಾಯಪಟ್ಟಿದ್ದಾರೆ. "ಶಾಂತಿಯುತ ಪ್ರತಿಭಟನೆಯ ನಮ್ಮ ಹಕ್ಕನ್ನು ಪ್ರಜಾಪ್ರಭುತ್ವದಡಿ ಧಿಕ್ಕರಿಸಲಾಗುತ್ತಿದೆ ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT