ಬಿ.ಎಸ್ ಪಾಟೀಲ್ 
ರಾಜ್ಯ

ಮಾರ್ಚ್‌ನಲ್ಲಿ ಬಿಲ್‌ ತೆರವುಗೊಳಿಸಲು ಹಗಲಿರುಳೆನ್ನದೆ ಅಧಿಕಾರಿಗಳ ಕೆಲಸ: ದೂರು ದಾಖಲು

ಮಾರ್ಚ್ 31 ರಂದು ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಸರ್ಕಾರಿ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ ಸರ್ಕಾರಿ ಕಚೇರಿಯಲ್ಲಿ ಮಿಂಚಿನ ವೇಗದಲ್ಲಿ ಬಿಲ್ ಕ್ಲಿಯರ್ ಆಗಿವೆ.

ಬೆಂಗಳೂರು: ಮಾರ್ಚ್ 31 ರಂದು ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ಸರ್ಕಾರಿ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ ಸರ್ಕಾರಿ ಕಚೇರಿಯಲ್ಲಿ ಮಿಂಚಿನ ವೇಗದಲ್ಲಿ ಬಿಲ್ ಕ್ಲಿಯರ್ ಆಗಿವೆ.

ಈ ಸಂಬಂಧ ವಕೀಲರಾದ ಎಸ್ ಉಮಾಪತಿ ಮತ್ತು ಸುಧಾ ಕಟ್ವಾ ಅವರು ಶನಿವಾರ ಮಧ್ಯಾಹ್ನ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರಿಗೆ ಔಪಚಾರಿಕ ದೂರು ಸಲ್ಲಿಸಿದರು, ಮಾರ್ಚ್ ಕೊನೆಯ ವಾರದಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಕ್ಲಿಯರ್ ಆಗದೆ ಉಳಿದ ಬಿಲ್ ಗಳ ಸಂಬಂಧ , ಕೆಲಸದ ಸಮಯವನ್ನು ಮೀರಿ ಹೆಚ್ಚು ಅವಧಿಕೆಲಸ ಮಾಡಲಾಗಿದೆ

ಇದನ್ನು 'ಮಾರ್ಚ್ ರಶ್' ಎಂದು ಕರೆದ ಸುಧಾ ಕಟ್ವಾ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ. ಮಾರ್ಚ್ 29 ರಂದು ರಾತ್ರಿ 8.39 ಕ್ಕೆ 1,04,050 ರೂ.ಗಳ ಬಿಲ್ ಅನ್ನು ಕ್ಲಿಯರ್ ಮಾಡಲಾಗಿದೆ, 7.27 ಕ್ಕೆ 4.59 ಲಕ್ಷ ರೂ.ಗೆ ಮತ್ತು ಇನ್ನೊಂದು 23 ಲಕ್ಷ ರೂ. ಮಾರ್ಚ್ 30 ರಂದು ಸಂಜೆ 6.10 ಕ್ಕೆ ತೆರವುಗೊಂಡಿದ್ದರೆ, ಮಾರ್ಚ್ 31 ರಂದು ಬೆಳಿಗ್ಗೆ 6.56 ಕ್ಕೆ 6.73 ಲಕ್ಷದ ಬಿಲ್  ತೆರವುಗೊಳಿಸಲಾಗಿದೆ. ಇವೆಲ್ಲವೂ ಕೆಲಸದ ಸಮಯವನ್ನು ಮೀರಿದ್ದು ದುರಾಡಳಿತಕ್ಕೆ ಕಾರಣವಾಗಬಹುದು ಎಂದು ಕತ್ವಾ ಶನಿವಾರ ಲೋಕಾಯುಕ್ತರಿಗೆ ವಿವರಿಸಿದ್ದಾರೆ.

ಕಮಿಷನ್ ಪಾವತಿಸಿ ಈ ಬಿಲ್‌ಗಳನ್ನು ತೆರವುಗೊಳಿಸಿರುವ ಶಂಕೆ ವ್ಯಕ್ತವಾಗಿದ್ದು, ಪರಿಶೀಲನೆ ನಡೆಸಬೇಕು ಎಂದು ವಕೀಲರು ಹೇಳಿದರು. ಲಂಚ ಮತ್ತು ಕಮಿಷನ್ ತೆಗೆದುಕೊಳ್ಳುವ ಬಿಜೆಪಿಯ ಕೊನೆಯ ಪ್ರಯತ್ನವಾಗಿದೆ. ಅವರು ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಅವರು ಮುಂಜಾನೆ ಮತ್ತು ತಡರಾತ್ರಿಯಲ್ಲಿ ಬಿಲ್‌ಗಳನ್ನು ತೆರವುಗೊಳಿಸಲು ಕೆಲಸ ಮಾಡಿದ್ದಾರೆ. ಇದು ಅವರ ದುರಾಸೆಯ ಸಂಕೇತವಾಗಿದೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

ಇದು ಹೊಸದೇನಲ್ಲ. ಯಾರನ್ನಾದರೂ ದೂಷಿಸುವುದು ತಪ್ಪು, ಏಕೆಂದರೆ ಅದು ಸ್ವಾತಂತ್ರ್ಯ ಬಂದಾಗಿನಿಂದ ನಡೆಯುತ್ತಿದೆ. ಮಾರ್ಚ್ 31 ರಂದು ಬಿಲ್‌ಗಳನ್ನು ಪಾಸ್ ಮಾಡುವ ಪದ್ಧತಿಯು ಅನೇಕ ಕಾರಣಗಳಿಗಾಗಿ ಅಭ್ಯಾಸವಾಗಿದೆ, ಅವುಗಳಲ್ಲಿ ಹಣದ ಲಭ್ಯತೆಯೂ ಒಂದಾಗಿದೆ. ಇದನ್ನು ಗಂಭೀರ ಅಪರಾಧ ಎಂದು ಪರಿಗಣಿಸಬೇಕಾಗಿಲ್ಲ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಎಂಎಲ್‌ಸಿ ಗೋ ಮಧುಸೂಧನ್ ಹೇಳಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು ಮತ್ತು ಈ ಕಚೇರಿಗಳ ಮೇಲೆ ದಾಳಿ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಕಾನೂನಿನ ಮುಂದೆ ನಾವೆಲ್ಲರೂ ಸಮಾನರು, ಆದರೂ ಇಬ್ಬರೂ ಅಪರಾಧಿಗಳಾಗಿರುತ್ತಾರೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?