ತುಮಕೂರು: ನಗರದ ಹೊರ ವಲಯದ ಬೆಳಗುಂಬದ ಸಿದ್ದರಾಮಶ್ವರ ಬಡಾವಣೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಗುರುವಾರ ಮೃತಪಟ್ಟಿದ್ದಾರೆ.
ವೀರಭದ್ರಯ್ಯ ಎಂಬುವರ ಪುತ್ರ ಯತೀಶ್ (14), ಸಿದ್ದಲಿಂಗಯ್ಯ ಎಂಬುವರ ಮಗ ಪ್ರಜ್ವಲ್ (14) ಮೃತರು. ಇಬ್ಬರು ಅಕ್ಕಪಕ್ಕದ ಮನೆ ನಿವಾಸಿಗಳು. ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.