ರಾಜ್ಯ

ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕ: ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಅಫಿಡವಿಟ್ಟು ಸಲ್ಲಿಕೆ

Sumana Upadhyaya

ನವದೆಹಲಿ: ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅಸಂವಿಧಾನಿಕ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಸರ್ಕಾರದ ಈ ಹೇಳಿಕೆ ಸಂವಿಧಾನದ ಆರ್ಟಿಕಲ್ 14,15 ಮತ್ತು 16ಕ್ಕೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ತತ್ವಗಳಿಗೆ ತದ್ವಿರುದ್ಧವಾಗಿದೆ.

ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ನೀಡಲಾದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ರಾಜ್ಯದ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ  ಮಾರ್ಚ್ 27ರ ಆದೇಶವನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ರಾಜ್ಯ ಸರ್ಕಾರ ಈ ಹೇಳಿಕೆ ನೀಡಿದೆ.

ಈ ಹಿಂದೆ ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿಗಳನ್ನು ಒದಗಿಸಿದಂತೆ ಅದೇ ಶಾಶ್ವತವಾಗಿ ಮುಂದುವರೆಸಲು ಯಾವುದೇ ಪ್ರಬಲ ಆಧಾರಗಳಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇದು ಸಂವಿಧಾನ ವಿರೋಧಿ ತತ್ವದ ಆಧಾರದ ಮೇಲೆ ಇದೆ ಎಂದು ರಾಜ್ಯ ಸರ್ಕಾರವು 1678 ಪುಟದ ಅಫಿಡವಿಟ್ಟನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.

ಸರ್ಕಾರ ತಂದಿರುವ ಹೊಸ ಒಳ ಮೀಸಲಾತಿ ಆದೇಶವು ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಸಮಸ್ಯೆಯನ್ನು ಬಗೆಹರಿಸಿ ಸಮಾನತೆ ತರಲು ಮತ್ತು ಸಾರ್ವಜನಿಕ ಸೇವೆಯನ್ನು ಹೆಚ್ಚು ಒಳಗೊಳ್ಳುವ ಮತ್ತು ಜನಸಂಖ್ಯೆಯ ಪ್ರತಿನಿಧಿಯಾಗಿ ಮಾಡಲು ದೃಢವಾದ ಕ್ರಮದ ಮೂಲಕ ಜಾಗೃತ ಆಡಳಿತದ ಉಪಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದು ಹೇಳಿದೆ.

2002 ರ ಮೀಸಲಾತಿ ಆದೇಶದ ಗುಂಪು 1ರಲ್ಲಿ ಉಲ್ಲೇಖಿಸಲಾದ ಹಿಂದುಳಿದ ಮುಸ್ಲಿಂ ಸಮುದಾಯದೊಳಗಿನ ಗುಂಪುಗಳು ಮೀಸಲಾತಿಯ ಪ್ರಯೋಜನಗಳನ್ನು ಪಡೆಯುತ್ತಿವೆ ಎಂದು ರಾಜ್ಯವು ಹೇಳಿದೆ.

ಆದ್ದರಿಂದ, 1979 ರಲ್ಲಿ ಮುಸ್ಲಿಂ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ ವರ್ಗಕ್ಕೆ ಆರಂಭಿಕ ಸೇರ್ಪಡೆ ಎಲ್.ಜಿ. ಹಾವನೂರ್ ನೇತೃತ್ವದ ಮೊದಲ ಹಿಂದುಳಿದ ವರ್ಗ ಆಯೋಗದ ಶಿಫಾರಸುಗಳಿಗೆ ವಿರುದ್ಧವಾಗಿತ್ತು. ಇದನ್ನು ಪ್ರಾಥಮಿಕವಾಗಿ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮುಂದುವರಿಸಲಾಗಿದೆ. ಆ ಹಂತದಲ್ಲಿ ಸಾಂವಿಧಾನಿಕ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ನೀಡಿರಲಿಲ್ಲ ಎಂದು ಸರ್ಕಾರದ ಅಫಿಡವಿಟ್ಟಿನಲ್ಲಿ ಹೇಳುತ್ತದೆ. 

SCROLL FOR NEXT