ಕಲಬುರಗಿ: ಕಲಬುರಗಿ ತಾಲೂಕಿನ ಸಿಂದಗಿ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಸೇರಿದ ಗ್ರಾಮ ಪಂಚಾಯಿತಿ (ಜಿ.ಪಂ.) ಸದಸ್ಯೆ ಮತ ಚಲಾವಣೆ ಮಾಡದಂತೆ ಅಪಹರಿಸುವ ಯತ್ನ ನಡೆದಿದೆ ಎನ್ನಲಾಗಿದೆ.
ಸಾವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯೆಯ ಅಪಹರಣಕ್ಕೆ ಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ನಡೆದಿದೆ.
ಬಿಜೆಪಿಗೆ ಸೇರಿದ ಸಿಂದಗಿ ಗ್ರಾ.ಪಂ.ನ 5ನೇ ವಾರ್ಡ್ನ ಸದಸ್ಯೆ ನಾಗಮ್ಮ ತುಕ್ಕಣ್ಣವರ ಕಲಬುರಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಸಿಂದಗಿ ಗ್ರಾ.ಪಂ.ನಲ್ಲಿ ಒಟ್ಟು 20 ಸದಸ್ಯರ ಬಲವಿದ್ದು, ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ತಲಾ 10 ಸದಸ್ಯರು ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಗಸ್ಟ್ 4 ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಶಿವಮೊಗ್ಗ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮತಾಂತರವಾಗಲು ಕಥೆ ಕಟ್ಟಿದ್ದ ಯುವತಿ ಪೋಷಕರ ಸುಪರ್ದಿಗೆ!
ಬುಧವಾರ ಸಂಜೆ ನಾಗಮ್ಮ ಅವರು ಗದ್ದೆಯಿಂದ ವಾಪಸಾಗುತ್ತಿದ್ದಾಗ , ಆಕೆಯ ಬಳಿ ಬಂದ 5 ಮಂದಿ ತಾವು ಪೊಲೀಸರು ನಮ್ಮನ್ನು ಹಿಂಬಾಲಿಸುವಂತೆ ಹೇಳಿದ್ದಾರೆ. ಆದರೆ ಅವರು ಪೊಲೀಸ್ ಸಿಬ್ಬಂದಿಯಲ್ಲ ಎಂದು ನಾಗಮ್ಮ ಅವರನ್ನು ಹಿಂಬಾಲಿಸಲು ನಿರಾಕರಿಸಿದರು. 5 ಜನರಲ್ಲಿ ಒಬ್ಬರು ಅವಳನ್ನು ಎಳೆಯಲು ಪ್ರಯತ್ನಿಸಿದರು.
ಈ ವೇಳೆ ನಾಗಮ್ಮ ಅವರ ಪುತ್ರ ಮಲ್ಲಿಕಾರ್ಜುನ್ 5 ಮಂದಿ ತನ್ನ ತಾಯಿಯನ್ನು ಅಪಹರಿಸಲು ಯತ್ನಿಸುತ್ತಿರುವುದನ್ನು ನೋಡಿದ್ದಾನೆ. ಅವನು ತನ್ನ ತಾಯಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ ಅಪಹರಣಕಾರರು ಹಿಂಬಾಲಿಸದಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಯುವತಿಯಿಂದ ಲೊಕೇಶನ್ ಶೇರ್; ಕಾಲ್ ಗರ್ಲ್ ಬುಕ್ ಮಾಡಿ ಕಿಡ್ನಾಪ್ ಆದ ಇಬ್ಬರು; 8 ಮಂದಿ ಬಂಧನ!
ಅಪಹರಣಕಾರರ ಮಾತನ್ನು ಆಕೆಯ ಮಗ ಕೇಳದಿದ್ದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಎಡಗೈಯ ಉಂಗುರ ಬೆರಳಿಗೆ ಗಾಯಗೊಳಿಸಿದ್ದಾರೆ. ಅಷ್ಟರಲ್ಲಿ ಈ ಘಟನೆಯನ್ನು ಕಂಡ ಕೆಲವು ಗ್ರಾಮಸ್ಥರು ಆಕೆಯ ರಕ್ಷಣೆಗೆ ಮುಂದಾದರು. ಇದನ್ನು ಕಂಡ ಗ್ಯಾಂಗ್ ಪರಾರಿಯಾಗಿದೆ ಎಂದು ನಾಗಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಾಗಮ್ಮ ಅವರು ಮಲ್ಲಿಕಾರ್ಜುನ ಕಡಗಂಚಿ, ಆಕಾಶ ರಾಣೇಶ ಪೀರ್, ರಾಜು, ಶಾಮ್ ಹಾಗೂ ಮತ್ತೊಬ್ಬನನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಘಟನೆಯ ಹಿಂದೆ ಕಾಂಗ್ರೆಸ್ ಪಕ್ಷದ ಎಲ್ಲಾ 10 ಗ್ರಾಮ ಪಂಚಾಯಿತಿ ಸದಸ್ಯರ ಕೈವಾಡವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.