ಬಂಡೀಪು ಅರಣ್ಯ- ಗ್ರಾಮ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್ 
ರಾಜ್ಯ

ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷಕ್ಕೆ ತಡೆ!

ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.

ಮೈಸೂರು: ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.

ಆನೆ ನಿರೋಧಕ ಕಂದಕ (ಇಪಿಟಿ) ಹಾಗೂ ಕೃಷಿ ಭೂಮಿಯ ಜಾಗದ ನಡುವೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಆನೆಗಳಿಗೆ ಮನುಷ್ಯನ ಇರುವಿಕೆ ಇರುವ ಪ್ರದೇಶಗಳಿಗೆ ಬಾರದಂತೆ ತಡೆಯೊಡ್ಡಲಾಗಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ಉಪಾಯ ಇದಾಗಿದ್ದು, ಈ ಹಿಂದೆ ಆನೆಗಳು ಅರಣ್ಯದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದದ್ದು ಸಾಮಾನ್ಯವಾಗಿತ್ತು. ನಿಯಂತ್ರಕ ಕ್ರಮವಾಗಿ ಅರಣ್ಯ ಸಿಬ್ಬಂದಿಗಳು ಆನೆ ನಿರೋಧಕ ಕಂದಕವನ್ನು ತೋಡಿದ್ದರು ಆದರೆ ಆನೆಗಳು ಗ್ರಾಮ ಪ್ರವೇಶಿಸುವುದು ಮುಂದುವರೆದಿತ್ತು. 1 ಕಿ.ಮೀ ವ್ಯಾಪ್ತಿಗೆ ಬ್ಯಾರಿಕೇಡ್ ಗಳನ್ನು ಹಾಕಲು ರೈಲ್ವೆ ಇಲಾಖೆಯಿಂದ ರೈಲು ಕಂಬಿಗಳನ್ನು 1.3 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿತ್ತು. ಆದರೂ ಅರಣ್ಯ ಸಿಬ್ಬಂದಿಗಳಿಗೆ ಆನೆಗಳು ಬ್ಯಾರಿಕೇಡ್ ದಾಟದಂತೆ ಮಾಡಲು ಸಾಧ್ಯವಾಗಿರಲಿಲ್ಲ.

ಗ್ರಾಮಗಳೆಡೆಗೆ ನಾವು ರೈಲು ಬ್ಯಾರಿಕೇಡ್ ಗಳನ್ನು ಅಳವಡಿಸುತ್ತಿದ್ದೇವೆ, ಇದಕ್ಕೂ ಮುನ್ನ ಈ ಬ್ಯಾರಿಕೇಡ್ ಗಳನ್ನು ಇಪಿಟಿಗಳ ಬಳಿ ಅರಣ್ಯದೆಡೆಗೆ ಅಳವಡಿಸಲಾಗಿತ್ತು. ಇದರಿಂದಾಗಿ ಆನೆಗಳಿಗೆ ಬ್ಯಾರಿಕೇಡ್ ಗಳನ್ನು ಹತ್ತಿ ಟ್ರೆಂಚ್ ನ್ನು ದಾಟಲು ಸುಲಭವಾಗುತ್ತಿತ್ತು. ಈಗ ಹೊಸ ವಿಧಾನದಲ್ಲಿ ಆನೆಗಳಿಗೆ ಬ್ಯಾರಿಕೇಡ್ ನ್ನು ದಾಟುವುದು ಕಷ್ಟವಾಗಲಿದೆ ಎಂದು ಬಿಟಿಆರ್ ನ ನಿರ್ದೇಶಕ ರಮೇಶ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT