'ಸೌರಶಕ್ತಿ ಚಾಲಿತ ಮಿನಿ ಟ್ರಾಕ್ಟರ್' 
ರಾಜ್ಯ

ಚಿತ್ರದುರ್ಗ: ರೈತರನ್ನು ಮತ್ತಷ್ಟು ಸಬಲೀಕರಣಗೊಳಿಸಲು ಬಂದಿದೆ 'ಸೌರಶಕ್ತಿ ಚಾಲಿತ ಮಿನಿ ಟ್ರಾಕ್ಟರ್'

ಸಿದ್ದವ್ವನದುರ್ಗ ಗ್ರಾಮದಲ್ಲಿ ಪ್ರಗತಿಪರ ರೈತ ಶಿವಣ್ಣನವರ ಪುತ್ರ ಚನ್ನಬಸಪ್ಪ ಅವರು ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್‌ಗಳನ್ನು ಬಳಸಲು ಆರಂಭಿಸಿ ತಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ: ಕೃಷಿ ವಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ, ರೈತರು, ವಿಶೇಷವಾಗಿ ಈ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಯುವಕರು, ಕೃಷಿಯ ಹೊಸ ತಂತ್ರಜ್ಞಾನಗಳತ್ತ ಮುಖ ಮಾಡಿದ್ದಾರೆ. ಪ್ರಾಥಮಿಕವಾಗಿ ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್ ಇವುಗಳಲ್ಲಿ ಒಂದಾಗಿದೆ.

ಸಿದ್ದವ್ವನದುರ್ಗ ಗ್ರಾಮದಲ್ಲಿ ಪ್ರಗತಿಪರ ರೈತ ಶಿವಣ್ಣನವರ ಪುತ್ರ ಚನ್ನಬಸಪ್ಪ ಅವರು ಸೌರಶಕ್ತಿ ಚಾಲಿತ ಮಿನಿ ಟ್ರ್ಯಾಕ್ಟರ್‌ಗಳನ್ನು ಬಳಸಲು ಆರಂಭಿಸಿ ತಮ್ಮ ಹೊಲದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಜಮೀನನ ಉಳುಮೆಗೆ ಬಳಸುತ್ತಿದ್ದ ಎತ್ತುಗಳಿಗೆ ಪರ್ಯಾಯವಾಗಿ ಈ ಟ್ರ್ಯಾಕ್ಟರ್ ಬಳಸುತ್ತಿದ್ದು, ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಸೌರಶಕ್ತಿಯಿಂದ ಚಲಿಸುವ ಮಿನಿ ಟ್ರಾಕ್ಟರ್ ಸಾರ್ವಜನಿಕರ ಮನಗೆದ್ದಿದೆ.

ರಾಗಿ ಮತ್ತು ಇತರ ಬೆಳೆಗಳನ್ನು ಬಿತ್ತನೆ ಮಾಡುವಾಗ ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಸುತ್ತಾರೆ. ಈ ಮಿನಿ ಸೌರಶಕ್ತಿ ಚಾಲಿತ ಟ್ರಾಕ್ಟರ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಅದು ಎಂಟು ಗಂಟೆಗಳ ಕಾಲ ಅಡೆತಡೆಯಿಲ್ಲದೆ ಕೆಲಸ ಮಾಡುತ್ತದೆ.

ಸಾಂಪ್ರದಾಯಿಕ ಕೃಷಿಯಲ್ಲಿ ಬಳಸುತ್ತಿದ್ದ ಎತ್ತುಗಳಿಗೆ ಪರ್ಯಾಯವಾಗಿ ಬಳಸಲಾಗುತ್ತದೆ. ಸೆಲ್ಕೋ ಫೌಂಡೇಶನ್ ಸೋಲಾರ್ ಟ್ರ್ಯಾಕ್ಟರ್‌ನ ವೆಚ್ಚವನ್ನು 2.09 ಲಕ್ಷ ರೂ.ಗಳನ್ನು ಭರಿಸಿದೆ, ಆದರೆ ಫಲಾನುಭವಿ ಚನ್ನಬಸಪ್ಪ ಅವರು ಸಲಕರಣೆಗಳ ವೆಚ್ಚವಾಗಿ 65,000 ರೂ. ವೆಚ್ಚ ಮಾಡಿದ್ದಾರೆ.

ಇಡೀ ವಿಶ್ವವೇ ಪ್ರಗತಿ ಹೊಂದುತ್ತಿರುವ ಸಂದರ್ಭದಲ್ಲಿ ಕೃಷಿ ಕ್ಷೇತ್ರವೂ ಮುನ್ನಡೆಯಬೇಕು. ಸೌರಶಕ್ತಿಯು ಕೃಷಿಯ ಯಾಂತ್ರೀಕರಣದಲ್ಲಿ ಬಳಸುವ ಪಳೆಯುಳಿಕೆಯ ಇಂಧನಕ್ಕೆ ಪರ್ಯಾಯವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT