ರಾಜ್ಯ

ಕೆಎಸ್ಆರ್ ಟಿಸಿ ಸೇವೆಗಳ ಉನ್ನತೀಕರಣ; ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪನೆಗೆ ಮುಂದು!

Srinivas Rao BV

ಬೆಂಗಳೂರು: ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸುವ ಮೂಲಕ ಕೆಎಸ್ ಆರ್ ಟಿಸಿ ಸೇವೆಗಳನ್ನು ಉನ್ನತೀಕರಿಸಲು ಮುಂದಾಗಿದೆ. 

ಆನ್ ಲೈನ್ ಟಿಕೆಟ್ ಕಾಯ್ದಿರಿಸುವಿಕೆ, ಸೀಟು ಕಾಯ್ದಿರಿಸುವಿಕೆ, ಮರುಪಾವತಿ, ದುರಸ್ತಿ ಎದುರಾದರೆ ಪರ್ಯಾಯ ಬಸ್ ವ್ಯವಸ್ಥೆ ಮಾಡುವುದು, ಮಾರ್ಗ ಬದಲಾವಣೆ, ಅಪಘಾತಗಳ ಕುರಿತ ಮಾಹಿತಿ ಈ ಕಂಟ್ರೋಲ್ ರೂಮ್ ಗೆ ರಿಯಲ್ ಟೈಮ್ ಆಧಾರದಲ್ಲಿ ಅಪ್ಡೇಟ್ ಆಗುತ್ತದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಸಹಾಯ ಮಾಡುವುದು ಮತ್ತು ಬಸ್‌ಗಳ ನಿಖರ ಆಗಮನ ಮತ್ತು ನಿರ್ಗಮನದ ಬಗ್ಗೆ ಅವರಿಗೆ ತಿಳಿಸುವುದು ಸಾಧ್ಯವಾಗಲಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ದಿ, ನಾನು ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಸರ್ಕಾರಿ ಬಸ್ ನಿಗಮಗಳನ್ನು ಉನ್ನತೀಕರಿಸಲು ಸಾಧ್ಯವಾದಷ್ಟೂ ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ ಹಾಗೂ ಸೇವೆಯ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನವನ್ನು ಸಾಧ್ಯವಾದಷ್ಟೂ ಹೆಚ್ಚು ಬಳಕೆ ಮಾಡುತ್ತಿದ್ದೇವೆ. ವೃತ್ತಿಪರ ತಂಡದಿಂದ ನಡೆಸಲ್ಪಡುವ KSRTC ಪ್ರಧಾನ ಕಛೇರಿಯಲ್ಲಿನ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪನೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಕಂಟ್ರೋಲ್ ರೂಂ ಕೆಎಸ್‌ಆರ್‌ಟಿಸಿಗೆ ಮಾತ್ರವಲ್ಲ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಬಸ್ ನಿಗಮಗಳಿಗೂ ಇರುತ್ತದೆ. ಕೇಂದ್ರ ಸರ್ಕಾರದಿಂದ ಮೂರನೇ ಎರಡರಷ್ಟು ಮತ್ತು ರಾಜ್ಯ ಸರ್ಕಾರದಿಂದ ಮೂರನೇ ಒಂದು ಭಾಗದಷ್ಟು ನೆರವಿನೊಂದಿಗೆ ಇದನ್ನು ಸ್ಥಾಪಿಸಲಾಗುತ್ತಿದೆ. 

ಕಂಟ್ರೋಲ್ ರೂಂ ಮೂಲಕ ಬಸ್ ನಿಲ್ದಾಣಗಳ ನಿರ್ವಹಣೆ ಹಾಗೂ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡುವ ವಿವರಗಳನ್ನು ಸ್ವಯಂಚಾಲಿತವಾಗಿ ಧ್ವನಿವರ್ಧಕಗಳ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಕಟಿಸಲಾಗುವುದು. ಅಲ್ಲದೆ, ಬಸ್ ಕೆಟ್ಟುಹೋದಾಗ ಅಥವಾ ಅಪಘಾತಗಳ ಸಂದರ್ಭದಲ್ಲಿ, ಕಂಟ್ರೋಲ್ ರೂಮ್ ತಕ್ಷಣವೇ ಎಚ್ಚರಿಸುತ್ತದೆ ಮತ್ತು ಪರ್ಯಾಯ ಬಸ್ ಅನ್ನು ಕಳುಹಿಸುತ್ತದೆ, ಇದರಿಂದಾಗಿ ಪ್ರಯಾಣಿಕರು ಹೆಚ್ಚು ಸಮಯ ಕಾಯುವುದು ತಪ್ಪುತ್ತದೆ.

ಪ್ರತಿಭಟನೆ, ಬಂದ್ ಅಥವಾ ರಸ್ತೆ ಮುಚ್ಚುವಿಕೆಯ ಸಂದರ್ಭದಲ್ಲಿ, ನಿಯಂತ್ರಣ ಕೊಠಡಿಯು ಮಾರ್ಗ ಬದಲಾವಣೆ, ಸೇವೆಗಳ ರದ್ದತಿ ಇತ್ಯಾದಿಗಳ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ. ಕಂಟ್ರೋಲ್ ರೂಂ ಪ್ರಯಾಣಿಕರ ಕುಂದುಕೊರತೆಗಳನ್ನು ನಿರ್ವಹಿಸಲು ತಂಡವನ್ನು ಹೊಂದಿರುತ್ತದೆ. ಇಲ್ಲಿ ಪಾರ್ಸೆಲ್ ಮತ್ತು ಕೊರಿಯರ್ ಸೇವೆಗೆ ಸಂಬಂಧಿಸಿದ ವಿವರಗಳನ್ನು ಸಹ ಒದಗಿಸಲಾಗುತ್ತದೆ.

SCROLL FOR NEXT