ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ ಕೊಲೆ ಪ್ರಕರಣಗಳ ಏರಿಕೆ; ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿದ ಶಾಕಿಂಗ್ ಮಾಹಿತಿ

ಎನ್‌ಸಿಆರ್‌ಬಿ ಡೇಟಾದ ವಿಶ್ಲೇಷಣೆ ಪ್ರಕಾರ, ರಾಜ್ಯದಲ್ಲಿ 2021ರಲ್ಲಿ 1,357 ರಷ್ಟಿದ್ದ ಕೊಲೆ ಪ್ರಕರಣಗಳ ಸಂಖ್ಯೆಯು ಕಳೆದ ವರ್ಷ 1,404ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ. 28 ರಾಜ್ಯಗಳ ಪೈಕಿ ಕರ್ನಾಟಕ 8ನೇ ಸ್ಥಾನದಲ್ಲಿದೆ.

ಬೆಂಗಳೂರು: 2022ರಲ್ಲಿ ಕರ್ನಾಟಕದಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಪ್ರಕಾರ, ಅವುಗಳಲ್ಲಿ ಬಹುಪಾಲು ವಿವಾದಗಳ ಕಾರಣದಿಂದ 'ವೈಯಕ್ತಿಕ ದ್ವೇಷ ಅಥವಾ ದ್ವೇಷ'ದ ಕಾರಣದಿಂದ ಆಗಿವೆ ಎಂದು ತಿಳಿದುಬಂದಿದೆ.

ಎನ್‌ಸಿಆರ್‌ಬಿ ಡೇಟಾದ ವಿಶ್ಲೇಷಣೆ ಪ್ರಕಾರ, ರಾಜ್ಯದಲ್ಲಿ 2021ರಲ್ಲಿ 1,357 ರಷ್ಟಿದ್ದ ಕೊಲೆ ಪ್ರಕರಣಗಳ ಸಂಖ್ಯೆಯು ಕಳೆದ ವರ್ಷ 1,404ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ.

28 ರಾಜ್ಯಗಳ ಪೈಕಿ, 2022ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿವೆ. ನಂತರ ಬಿಹಾರ (2,930) ಮತ್ತು ಮಹಾರಾಷ್ಟ್ರ (2,295) ಸ್ಥಾನ ಪಡೆದಿವೆ. ಕರ್ನಾಟಕ 8ನೇ ಸ್ಥಾನದಲ್ಲಿದೆ.

ಎನ್‌ಸಿಆರ್‌ಬಿ ಪ್ರಕಾರ, ಕರ್ನಾಟಕದಲ್ಲಿ ಕೊಲೆಯ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 2.1 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ 90.2 ರಷ್ಟಿದೆ. ಎನ್‌ಸಿಆರ್‌ಬಿಯು ಅಪರಾಧದ ದತ್ತಾಂಶಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಕಾರ್ಯವನ್ನು ನಿರ್ವಹಿಸುತ್ತದೆ.

ರಾಜ್ಯದಲ್ಲಿ 2022ರಲ್ಲಿ ನಡೆದ ಅತಿ ಹೆಚ್ಚು ಕೊಲೆ ಪ್ರಕರಣಗಳಲ್ಲಿ 706 ಪ್ರಕರಣಗಳಿಗೆ 'ವಿವಾದಗಳು' ಕಾರಣವಾಗಿದ್ದು, ನಂತರ 353 ಪ್ರಕರಣಗಳಲ್ಲಿ 'ವೈಯಕ್ತಿಕ ದ್ವೇಷ, 108 ಪ್ರಕರಣಗಳಲ್ಲಿ ಅಕ್ರಮ ಸಂಬಂಧ, 59 ಪ್ರಕರಣಗಳಲ್ಲಿ 'ಲಾಭ', 44 ಪ್ರಕರಣಗಳಲ್ಲಿ ಪ್ರೇಮ ಪ್ರಕರಣಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಸಿಆರ್‌ಬಿಯ ವಾರ್ಷಿಕ ಅಪರಾಧ ವರದಿ ತಿಳಿಸಿದೆ.

ಕೊಲೆಯಾದ ಒಟ್ಟು ಸಂತ್ರಸ್ತರಲ್ಲಿ ಹೆಚ್ಚಿನವರು ಪುರುಷರು (1,007), 472 ಮಹಿಳೆಯರು ಮತ್ತು ಮೂವರು ತೃತೀಯಲಿಂಗಿಗಳು ಎಂದು ಅಂಕಿಅಂಶಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT