ರಾಜ್ಯ

ಮೇಲ್ಮನೆ, ಲೋಕಸಭೆಗಳಲ್ಲಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ಹಲವು ಮಂದಿ ಇರುವುದು ಬೇಸರದ ಸಂಗತಿ: ಹೆಚ್ ವಿಶ್ವನಾಥ್

Srinivas Rao BV

ಬೆಳಗಾವಿ: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳ ಹಲವು ಮಂದಿ ಆವರಿಸಿಕೊಂಡಿರುವುದು ಬೇಸರ ತರಿಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ. 

ವಕೀಲರ ಮೇಲಿನ ಹಿಂಸಾಚಾರ ನಿಷೇಧ ಮಸೂದೆ ವಿಷಯವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ವಿಶ್ವನಾಥ್, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಪೈಕಿ ಹೆಚ್ಚಿನವರು ವಕೀಲಿಕೆಯ ಹಿನ್ನೆಲೆಯುಳ್ಳವರಾಗಿರುತ್ತಿದ್ದರು ಎಂದು ಹೇಳಿದ್ದಾರೆ. 

ಅದರೆ ಈಗ ಸದನಕ್ಕೆ ಆಯ್ಕೆಯಾಗುತ್ತಿರುವವರು ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ಮಸೂದೆಯನ್ನು ಜೆಡಿಎಸ್ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಸಾಮಾನ್ಯರಿಗೆ ಮತ್ತು ಸಾರ್ವಜನಿಕರಿಗೆ ಇದೇ ರೀತಿಯ ರಕ್ಷಣೆ ಬೇಕಾದಾಗ ಪ್ರತ್ಯೇಕ ಮಸೂದೆಯನ್ನು ಅಂಗೀಕರಿಸುವ ಅಗತ್ಯವೇನಿದೆ ಎಂದು ಆಶ್ಚರ್ಯಪಟ್ಟರು.

ವಕೀಲರ ರಕ್ಷಣೆಗೆ ಪ್ರತ್ಯೇಕ ಕಾನೂನು ತರುತ್ತಿರುವುದು ಕೆಟ್ಟ ನಿದರ್ಶನ ಎಂದ ಅವರು, ನಾಳೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇದೇ ರೀತಿಯ ಕಾಯ್ದೆಗಳನ್ನು ರೂಪಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

“ಮಹಿಳೆಯರು, ಕಾರ್ಮಿಕರು, ಮಕ್ಕಳು ಮತ್ತು ಪೊಲೀಸರ ಮೇಲೆ ಕೆಲವು ಸಮಾಜ ವಿರೋಧಿ ಶಕ್ತಿಗಳು ಥಳಿಸಲ್ಪಟ್ಟ ದೌರ್ಜನ್ಯದ ವರದಿಗಳನ್ನು ನಾವು ಕೇಳುತ್ತಿದ್ದೇವೆ. ಅವರ ಸುರಕ್ಷತೆಗೆ ಪ್ರತ್ಯೇಕ ಕಾನೂನುಗಳ ಅಗತ್ಯವಿಲ್ಲವೇ ಎಂದು ಮರಿತಿಬ್ಬೇಗೌಡ ಪ್ರಶ್ನಿಸಿದ್ದಾರೆ.

ಕಾಯಿದೆಯನ್ನು ಬೆಂಬಲಿಸಿದ ಮತ್ತು ಸ್ವಾಗತಿಸಿದ ಇತರ ಎಂಎಲ್‌ಸಿಗಳು, ವಕೀಲರ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳ ವಿರುದ್ಧ ಕನಿಷ್ಠ ಏಳು ವರ್ಷಗಳ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಸಲಹೆ ನೀಡಿದರು.

ಇದಕ್ಕೆ ವಿಧೇಯಕವನ್ನು ಅನುಮೋದನೆಗಾಗಿ ಮಂಡಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಸಲಹೆಯನ್ನು ಸ್ವಾಗತಿಸಿದರು, ಆದಾಗ್ಯೂ, ತಜ್ಞರೊಂದಿಗೆ ವಿವರವಾದ ಚರ್ಚೆಯ ನಂತರ ಮಸೂದೆಯಲ್ಲಿ ಪ್ರಸ್ತಾಪಿಸಲಾದ ಶಿಕ್ಷೆಯ ಪ್ರಮಾಣವನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಬಳಿಕ ಕೌನ್ಸಿಲ್‌ನಲ್ಲಿ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

SCROLL FOR NEXT