ಬಿಡಿಎ ಸಾಂದರ್ಭಿಕ ಚಿತ್ರ 
ರಾಜ್ಯ

BDA: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ!

ಬಿಡಿಎ ಸಿಬ್ಬಂದಿಯ ಸಂಖ್ಯೆ 333 ಇದ್ದು, ಈ ಪೈಕಿ 129 ಮಂದಿ ಬಿಡಿಎ ಉದ್ಯೋಗಿಗಳಾಗಿದ್ದಾರೆ, ಉಳಿದ ಸಿಬ್ಬಂದಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆಗೊಂಡಿದ್ದಾರೆ.

ಬೆಂಗಳೂರು: ಬಿಡಿಎಗೆ ಕಳೆದ ಬಾರಿ ಸಿಬ್ಬಂದಿಗಳ ನೇರ ನೇಮಕಾತಿ ನಡೆದಿದ್ದು 1996 ರಲ್ಲಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸಗಳು ಹಲವು ಪಟ್ಟು ಹೆಚ್ಚಿವೆ, ಆದರೆ ಕಳೆದ 27 ವರ್ಷಗಳಲ್ಲಿ ಯಾವುದೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿಲ್ಲ ಎಂದು ಅನೇಕ ಅಧಿಕಾರಿಗಳು ಹೇಳಿದ್ದಾರೆ. ಯೋಜನೆಗಳು ಮತ್ತು ಕಡತಗಳು ಆಮೆಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಬಿಡಿಎ ಸಿಬ್ಬಂದಿಯ ಸಂಖ್ಯೆ 333 ಇದ್ದು, ಈ ಪೈಕಿ 129 ಮಂದಿ ಬಿಡಿಎ ಉದ್ಯೋಗಿಗಳಾಗಿದ್ದಾರೆ, ಉಳಿದ ಸಿಬ್ಬಂದಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆಗೊಂಡಿದ್ದಾರೆ.

ಬಿಡಿಎ ಸಿಬ್ಬಂದಿಗಳ ಪೈಕಿ ಕೇಸ್ ವರ್ಕರ್ ಗಳು, ಎಫ್ ಡಿಎ, ಎಸ್ ಡಿಎ, ಕ್ಲಾಸ್ ಡಿ ಉದ್ಯೋಗಿಗಳು ಹಾಗೂ ಮೇಲ್ವಿಚಾರಕರು ಇದ್ದಾರೆ. ನಿಯೋಜಿತ ಸಿಬ್ಬಂದಿಯಲ್ಲಿ ಎಂಜಿನಿಯರ್‌ಗಳು ಮತ್ತು ಉಪ ಕಾರ್ಯದರ್ಶಿಗಳು ಇರುತ್ತಾರೆ ಮತ್ತು ಆ ಮಟ್ಟದಲ್ಲಿ ಯಾವುದೇ ಕೊರತೆಯಿಲ್ಲ.

ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, “ನಾವು ಅಗತ್ಯವಿರುವ ಸಿಬ್ಬಂದಿಗಳಿಗಿಂತ 40% ರಷ್ಟು ಸಿಬ್ಬಂದಿ ಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇದು ಪ್ರತಿಯೊಂದು ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಬಿಡಿಎ ಪ್ರಸ್ತುತ 64 ಲೇಔಟ್‌ಗಳನ್ನು ಹೊಂದಿದ್ದು, ಬನಶಂಕರಿ VI ನೇ ಹಂತದ ಲೇಔಟ್ ಮತ್ತು ನಾಡಪ್ರಭು ಕೆಂಪೇಗೌಡ ಲೇಔಟ್ 20,000 ಕ್ಕೂ ಹೆಚ್ಚು ಸೈಟ್‌ಗಳನ್ನು ಹೊಂದಿದೆ. ಇವುಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸಲು ನಾವು ಕೇವಲ 22 ಸೂಪರಿಂಟೆಂಡೆಂಟ್‌ಗಳು, 28 ಎಫ್‌ಡಿಎಗಳು ಮತ್ತು 30 ಎಸ್‌ಡಿಎಗಳನ್ನು ಹೊಂದಿದ್ದೇವೆ.

ನಾಲ್ಕೈದು ಬಡಾವಣೆಗಳ ನಿವಾಸಿಗಳ ಸಮಸ್ಯೆಗಳನ್ನು ಒಬ್ಬರೇ ಕೇಸ್ ವರ್ಕರ್ ನಿಭಾಯಿಸುವ ದುರದೃಷ್ಟಕರ ಸನ್ನಿವೇಶವಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. "129 ಸಿಬ್ಬಂದಿ ಸಂಖ್ಯೆ ಅಸಮರ್ಪಕವಾಗಿದೆ. ಕೆಲಸವನ್ನು ಸರಿಯಾಗಿ ಮಾಡಲು ಕನಿಷ್ಠ 300 ಸಿಬ್ಬಂದಿಗಳ ಸಾಮರ್ಥ್ಯದ ಅಗತ್ಯವಿದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT