ಸಾಂದರ್ಭಿಕ ಚಿತ್ರ 
ರಾಜ್ಯ

ಹಿನ್ನೋಟ 2023: ಕರ್ನಾಟಕದಲ್ಲಿ ‘ಹಸಿರು ಬರ’; ರೈತರು, ಜನರಿಗೆ ಸಂಕಷ್ಟ!

2023 ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲದ ವರ್ಷವಾಗಲಿದೆ. ರಾಜ್ಯದಲ್ಲಿ 2001 ರಿಂದ ಇಲ್ಲಿಯವರೆಗೆ 16 ಬರಗಾಲದ ವರ್ಷಗಳು ದಾಖಲಾಗಿದ್ದರೂ, ಈ ಬಾರಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ.

ಬೆಂಗಳೂರು: 2023 ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲದ ವರ್ಷವಾಗಲಿದೆ. ರಾಜ್ಯದಲ್ಲಿ 2001 ರಿಂದ ಇಲ್ಲಿಯವರೆಗೆ 16 ಬರಗಾಲದ ವರ್ಷಗಳು ದಾಖಲಾಗಿದ್ದರೂ, ಈ ಬಾರಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಈ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್‌ಗಳು ಕಡಿಮೆ ಮಳೆಯನ್ನು ದಾಖಲಿಸಿವೆ, ಇದರ ಪರಿಣಾಮವಾಗಿ 236 ತಾಲ್ಲೂಕುಗಳ ಪೈಕಿ 223 ಬರಪೀಡಿತ ಎಂದು ಘೋಷಿಸಲಾಗಿದೆ.

ಈ ವರ್ಷವೂ ರಾಜ್ಯ ‘ಹಸಿರು ಬರ’ ಕಂಡಿದೆ. ಕರ್ನಾಟಕಕ್ಕೆ ಬರ ಪರಿಸ್ಥಿತಿ ಅವಲೋಕಿಸಲು ಅಂತರ್‌ಸಚಿವಾಲಯದ ಕೇಂದ್ರ ತಂಡ ಆಗಮಿಸಿದ್ದಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ಅವರು ‘ಹಸಿರು ಬರ’ ಎಂದರೇನು ಎಂಬುದನ್ನು ವಿವರಿಸಿದರು. ಕೆಲವೆಡೆ ಹಸಿರು ಹೊದಿಕೆ ಇದ್ದರೂ ಇಳುವರಿ ಕಡಿಮೆಯಾಗಿದೆ. ಈ ‘ಹಸಿರು ಬರ’ದ ಬಗ್ಗೆ ನಾವು ಕೇಂದ್ರ ತಂಡಕ್ಕೆ ತಿಳಿಸಿದ್ದೇವೆ, ಇದು ಅಸಾಮಾನ್ಯವಾಗಿದೆ ಎಂದು ಬೈರೇಗೌಡ ಹೇಳಿದರು.

ನೈಋತ್ಯ ಮಾನ್ಸೂನ್ (ಜೂನ್ ನಿಂದ ಸೆಪ್ಟೆಂಬರ್ ವರೆಗೆ) ಅವಧಿಯಲ್ಲಿ ಕರ್ನಾಟಕವು 642 ಮಿಮೀ ಮಳೆಯನ್ನು ಪಡೆದಿದೆ, ಆದರೆ 852 ಮಿಮೀ ವಾಸ್ತವಿಕ ಮಳೆಯಾಗಿದೆ. ಈ ವರ್ಷ ಈಶಾನ್ಯ ಮುಂಗಾರು ಕೂಡ ವಿಫಲವಾಗಿದೆ. ರಾಜ್ಯವು ನೀರಾವರಿ ಮತ್ತು ಕುಡಿಯುವ ಉದ್ದೇಶಗಳಿಗಾಗಿ ನೀರನ್ನು ಪೂರೈಸುವ 13 ಜಲಾಶಯಗಳನ್ನು ಹೊಂದಿದೆ, ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನೀರು ತೀವ್ರವಾಗಿ ಕಡಿಮೆಯಾಗಿದೆ. ಇದು ಕುಡಿಯುವ ನೀರನ್ನು ಕಾಯ್ದಿರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದೆ.

ಮಳೆರಾಯನ ಕೃಪಾಕಟಾಕ್ಷದಲ್ಲಿದ್ದ ರೈತರು ನಿರಾಶೆಗೊಂಡು ಕಂಗಾಲಾಗಿದ್ದಾರೆ. ಒಂದೆಡೆ ಮಳೆ ಬಾರದೆ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದರೆ, ಜಾನುವಾರುಗಳಿಗೆ ಮೇವೂ ಇಲ್ಲದಂತಾಗಿದೆ. ಮುಂಗಾರು ಆರಂಭದಲ್ಲಿ ಸಾಕಷ್ಟು ಮಳೆ ಬಾರದೆ ಕೆಲವೆಡೆ ಬಿತ್ತನೆ ಮಾಡಿದ್ದರೂ ಮಳೆ ಕೊರತೆಯಿಂದ ಬೆಳೆ ಬಾಡುವುದನ್ನು ಕಂಡಿದ್ದಾರೆ. ಸುಗ್ಗಿಯ ಕಾಲ ಬಂದಾಗ, ಬಿತ್ತನೆ ಮಾಡಿದವರು ಮತ್ತು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಸಮರ್ಥರಾದವರು, ಇಳುವರಿ ಕಡಿಮೆ ಪಡೆದಿದ್ದಾರೆ.

ಇದು ನಿರೀಕ್ಷಿತ 148 ಮೆಟ್ರಿಕ್ ಲಕ್ಷ ಟನ್ ಧಾನ್ಯದಿಂದ ಸುಮಾರು 80 ಲಕ್ಷ ಮೆ.ಟನ್ ಗೆ ಆಹಾರಧಾನ್ಯ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಯಿತು. ಇದರಿಂದ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. 2023 ರಲ್ಲಿ ಎರಡು ಬಾರಿ ವಿಫಲವಾದ ಮಾನ್ಸೂನ್‌ಗಳ ಡಬಲ್ ಹೊಡೆತ ಎದುರಿಸಿದ ರೈತರಿಗೆ ಈಗ ಮುಂದಿನ ವರ್ಷದವರೆಗೆ ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಅದು ಕಳೆದ ವರ್ಷಕ್ಕಿಂತ ಉತ್ತಮವಾಗಿರುತ್ತದೆ ಎಂದು ಆಶಿಸುತ್ತಿದ್ದಾರೆ.

18,000 ಕೋಟಿ ಪರಿಹಾರ ಬಯಸಿದ ಸಿಎಂ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗೆ 18,177 ಕೋಟಿ ರೂ. ಉನ್ನತಾಧಿಕಾರ ಸಮಿತಿಯ ತುರ್ತು ಸಭೆ ನಡೆಸಿ ಬರ ಎದುರಿಸಲು ಕೂಡಲೇ ಹಣ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಧಾನಿ ಮೋದಿ ನಿರ್ದೇಶನ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. 46.11 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಮತ್ತು 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪರಿಹಾರದಲ್ಲಿ ರಾಜಕೀಯ: ರಾಜ್ಯದಲ್ಲಿನ ಬರ ಪರಿಸ್ಥಿತಿ ವಿವರಿಸಲು ಸಮಯ ನೀಡದ ಕೇಂದ್ರ ಸರ್ಕಾರದ ಧೋರಣೆಯನ್ನು ರಾಜ್ಯ ಸರ್ಕಾರವನ್ನು ದೂಷಿಸಿತು. ಪರಿಹಾರ ನೀಡದಿರುವ ಬಗ್ಗೆ ಆರೋಪ ಮಾಡಿದಾಗ ಬೆಳೆ ನಷ್ಟ ಪರಿಹಾರ ವಿಷಯ ರಾಜಕೀಯ ತಿರುವು ಪಡೆದುಕೊಂಡಿತು. ಮತ್ತೊಂದೆಡೆ ಬಿಜೆಪಿ ನಾಯಕರು, ರಾಜ್ಯ ಸರ್ಕಾರವು ತಕ್ಷಣವೇ ತನ್ನ ಖಜಾನೆಯಿಂದ ಪರಿಹಾರವನ್ನು ಪಾವತಿಸಬೇಕು ಮತ್ತು ಅನಂತರ ಕೇಂದ್ರದ ಪರಿಹಾರ ಪಡೆಯಬೇಕು. ಖಾತ್ರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಖರ್ಚು ಮಾಡಿರುವುದರಿಂದ ಹಣದ ಕೊರತೆ ಉಂಟಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಕಾವೇರಿ ವಿವಾದ:  ಸೆಪ್ಟೆಂಬರ್‌ನಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರರು ಬಂದ್‌ಗೆ ಕರೆ ನೀಡಿದ್ದರು. ಈ ಮಧ್ಯೆ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ತಮಿಳುನಾಡಿಗೆ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದ್ದು, ಮೈಸೂರು, ಮಂಡ್ಯ ಮತ್ತು ರಾಮನಗರ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ.

ರೈತರ ಆತ್ಮಹತ್ಯೆಗಳು:

  • ಜೂನ್ ನಿಂದ ನವೆಂಬರ್ ವರೆಗೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ
  • 354 ರೈತರು ಪರಿಹಾರಕ್ಕೆ ಅರ್ಹರು
  • 321 ರೈತರಿಗೆ 16.05 ಕೋಟಿ ಪರಿಹಾರ; 33 ಮಂದಿಗೆ ಇನ್ನೂ ಪರಿಹಾರ ನೀಡಬೇಕಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT