ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: 8 ಗಂಟೆ ತಡವಾಗಿ ಬಂದ ಇಂಡಿಗೋ ವಿಮಾನ; ಕಾದು ಕಾದು ಪ್ರಯಾಣಿಕರು ಹೈರಾಣ!

ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ತಡವಾಗಿ ಬಂದಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕಾದು ಹೈರಾಣಾದ ಘಟನೆ ಗುರುವಾರ ನಡೆದಿದೆ.

ಬೆಂಗಳೂರು: ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ತಡವಾಗಿ ಬಂದಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕಾದು ಹೈರಾಣಾದ ಘಟನೆ ಗುರುವಾರ ನಡೆದಿದೆ.

ಬಂದಿದ್ದಷ್ಟೇ ಅಲ್ಲದೆ, ವಿಮಾನ ಹತ್ತಿದ ಬಳಿಕವೂ ಪ್ರಯಾಣಿಕರು 90 ನಿಮಿಷಗಳ ಕಾದು ಕುಳಿತಿದ್ದು, ಈ ಬೆಳವಣಿಗೆಗೆ ವಿಮಾನಯಾನ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

6E 6622 ವಿಮಾನ ಬುಧವಾರ ದೆಹಲಿಯಿಂದ ರಾತ್ರಿ 7.10 ಕ್ಕೆ ಟೇಕ್ ಆಫ್ ಆಗಿ ರಾತ್ರಿ 9.50 ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಗುರುವಾರ ಬೆಳಗಿನ ಜಾವ 2.57ಕ್ಕೆ ಟೇಕಾಫ್ ಆಗಿ, 5.45ಕ್ಕೆ ಬೆಂಗಳೂರಿಗೆ ಬಂದಿತ್ತು.

ಎಂಎನ್'ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹೆಬ್ಬಾಳ ನಿವಾಸಿ ವಂದನಾ ಮಾಥರೂ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು.

ವಿಮಾನದಲ್ಲಿ ತಾವು ಎದುರಿಸಿದ ಪರಿಸ್ಥಿತಿಯನ್ನು ವಂದನಾ ಅವರು ವಿವರಿಸಿದ್ದಾರೆ. ವಿಮಾನವು ರಾತ್ರಿ 8.15ಕ್ಕೆ ಹೊರಡುವ ಕೆಲವು ಗಂಟೆಗಳ ಮೊದಲು ನಮಗೆ ಸಂದೇಶ ಬಂದಿತ್ತು. ಆದರೆ, 8 ಗಂಟೆಯಾದರೂ ವಿಮಾನದೊಳಗೆ ಹೋಗಿರಲಿಲ್ಲ. ಕೌಂಟರ್ ನಲ್ಲಿ ಪರಿಶೀಲಿಸಿದಾಗ, ಇನ್ನು ಕೆಲವೇ ಸಮಯಗಲ್ಲಿ ವಿಮಾನ ಬರಲಿದೆ ಎಂದು ಹೇಳಿದ್ದರು. ರಾತ್ರಿ 9.30ಕ್ಕೆ ಮತ್ತೆ ಪರಿಶೀಲಿಸಿದಾಗ ವಿಮಾನ ಜೈಪುರಕ್ಕೆ ಹೊರಟಿರುವುದಾಗಿ ತಿಳಿಸಲಾಯಿತು, 100 ಮಂದಿಯನ್ನು ನಿರ್ವಹಿಸಲು ಕೌಂಟರ್ ನಲ್ಲಿ ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮಾತ್ರವೇ ಇದ್ದರು. ಪದೇ ಪದೇ ಇನ್ನು ಕೆಲವೇ ನಿಮಿಷಗಳಲ್ಲಿ ಎಂದು ಹೇಳುತ್ತಲೇ ಇದ್ದರು. ಆದರೆ. ಮಧ್ಯರಾತ್ರಿ 2.57ಕ್ಕೆ ವಿಮಾನ ಟೇಕ್ ಆಫ್ ಆಗಿತ್ತು.

ಕೆಲ ಕಾರ್ಯಾಚರಣೆಯ ಕಾರಣಗಳಿಂದಾಗಿ ಡಿ.27ರಂದು ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ 6E 6622 ಇಂಡಿಗೋ ವಿಮಾನ ತಡವಾಗಿತ್ತು. ವಿಮಾನ ವಿಳಂಬವಾಗಿ ಬರುವಿಕೆಯನ್ನು ಪ್ರಯಾಣಿಕರಿಗೆ ತಿಳಿಸಲಾಗಿತ್ತು. ಉಪಾಹಾರಗಳನ್ನು ನೀಡಲಾಗಿತ್ತು. ಪ್ರಯಾಣಿಕರಿಗಾದ ಅನಾನುಕೂಲತೆ ಬಗ್ಗೆ ವಿಷಾದಿಸುತ್ತೇವೆಂದು ಇಂಡಿಗೋ ವಿಮಾನದ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT