ರಾಜ್ಯ

ಬೆಳಗಾವಿ: ಬನಶಂಕರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ, ವಿಶೇಷ ಪೂಜೆ ಸಲ್ಲಿಕೆ

Manjula VN

ಬೆಳಗಾವಿ: ಬೆಳಗಾವಿಯ ವಡಗಾಂವದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ‘ಗಣ ಹೋಮ’ ಮತ್ತು ‘ಚಂಡಿಕಾ ಹೋಮ’ದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಧಾರ್ಮಿಕ ಕಾರ್ಯಗಳು ಮನುಷ್ಯನ ಆಗುಹೋಗುಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ತಾನು, ತನ್ನದು ಎಂಬ ಭಾವನೆ ಬಿಟ್ಟು ಸಕಲ ಜಗತ್ತಿನ ಒಳಿತು ಬಯಸುವವರಿಗೆ ದೈವೀ ಶಕ್ತಿಗಳು ಸದ್ಗತಿಯನ್ನೇ ನೀಡುತ್ತವೆ. ನಾಡಿನ ಸಮಸ್ತ ಜನತೆಗೆ ಒಳಿತು ಮಾಡುವಂತೆ ಈ ಸಂದರ್ಭದಲ್ಲಿ ದೇವಿ ಮುಂದೆ ಪ್ರಾರ್ಥನೆ ಸಲ್ಲಿಸಿದ್ದಾನೆಂದು ಹೇಳಿದರು.

ಈ ಸಂದರ್ಭದಲ್ಲಿ ವೆಂಕಟೇಶ ಹೊನ್ನಳ್ಳಿ, ಹನುಮಂತ ಗರಡಿಮನಿ, ಉಮೇಶ ಶಿರಹಟ್ಟಿ, ವಿನಯ ಮಾಳಗಿ, ರಮೇಶ ಸೊಂಟಕ್ಕಿ ಹಾಗೂ ಬನಶಂಕರಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

SCROLL FOR NEXT