ರಾಜ್ಯ

10 ಕೋಟಿ ರೂ. ವೆಚ್ಚದ ಶಿವ ಸೃಷ್ಟಿ ಯೋಜನೆ ಪೂರ್ಣ, ಶೀಘ್ರದಲ್ಲೇ ಉದ್ಘಾಟನೆ: ಶಾಸಕ ಅಭಯ್ ಪಾಟೀಲ್

Manjula VN

ಬೆಳಗಾವಿ: ಬೆಳಗಾವಿಯ ಛತ್ರಪತಿ ಶಿವಾಜಿ ಮಹಾರಾಜ ಗಾರ್ಡನ್‌ನಲ್ಲಿ ಆರಂಭವಾದ ಶಿವ ಸೃಷ್ಟಿ ಯೋಜನೆಯ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವ ಸೃಷ್ಟಿಯ ಉದ್ಘಾಟನೆಗೆ ಅದ್ಧೂರಿ ಸಮಾರಂಭ ಏರ್ಪಡಿಸಲಾಗುವುದು. ಫೆ.19 ಅಥವಾ ಫೆ.26ರಂದು ಉದ್ಘಾಟನೆ ನಡೆಯುವ ಸಾಧ್ಯತೆ     ಇದೆ. ಈ ಸಂಬಂಧ ಫೆ.6ರಂದು ಸಭೆ ನಡೆಯಲಿದ್ದು, ಆ ಬಳಿಕವೇ ಉದ್ಘಾಟನಾ ಕಾರ್ಯಕ್ರಮದ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಯೋಜನೆಗೆ ರೂ.10 ಕೋಟಿ ವೆಚ್ಚ ಮಾಡಲಾಗಿದ್ದು, ಶಿವಾಜಿ ಮಹಾರಾಜರ ಜೀವನ, ಸಾಧನೆ ಹಾಗೂ ಶೌರ್ಯಗಳನ್ನು ಶಿವಸೃಷ್ಟಿ ಯೋಜನೆ ಕೇಂದ್ರೀಕರಿಸುತ್ತದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನವನ್ನು ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ನಡೆಸಲಾಗುವುದು.

2012ರ ನವೆಂಬರ್‌ನಲ್ಲಿ ಯೋಜನೆಯ ಕಾರ್ಯ ಆರಂಭಗೊಂಡಿದ್ದು, 2013ರ ಏಪ್ರಿಲ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ, ಕೆಲ ಕಾರಣಾಂತರಗಳಿಂದ ಕಾಮಗಾರಿ ವಿಳಂಬಗೊಂಡಿತ್ತು.

SCROLL FOR NEXT