ಸಂಗ್ರಹ ಚಿತ್ರ 
ರಾಜ್ಯ

ಕೋವಿಡ್-19: ಜೀನೋಮಿಕ್ ಸೀಕ್ವೆನ್ಸಿಂಗ್ ನಡೆಸಲು ಬಿಎಂಸಿಆರ್'ಐಗೆ ಉಪಕರಣಗಳ ಕೊರತೆ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (BMCRI), ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಮತ್ತು ಕೋವಿಡ್ -19 ಸೋಂಕು ದೃಢಪಟ್ಟವರ ಜೀನೋಮಿಕ್ ಅನುಕ್ರಮ ನಡೆಸುತ್ತಿದ್ದು, ಸಂಸ್ಥೆಗೆ ಇದೀಗ ಪರೀಕ್ಷೆ ನಡೆಸಲು ಉಪಕರಣಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (BMCRI), ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು ಮತ್ತು ಕೋವಿಡ್ -19 ಸೋಂಕು ದೃಢಪಟ್ಟವರ ಜೀನೋಮಿಕ್ ಅನುಕ್ರಮ ನಡೆಸುತ್ತಿದ್ದು, ಸಂಸ್ಥೆಗೆ ಇದೀಗ ಪರೀಕ್ಷೆ ನಡೆಸಲು ಉಪಕರಣಗಳ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ಜೀನೋಮಿಕ್ ಉಪಕ್ರಮ ದುಬಾರಿ ಪರೀಕ್ಷೆಯಾಗಿದೆ. ಒಂದು ಮಾದರಿಯ ಪರೀಕ್ಷಾ ಚಕ್ರ ನಿರ್ವಹಿಸಲು 10,000 ರೂ ಆಗಲಿದೆ. ಸಂಪೂರ್ಣ ಪರೀಕ್ಷಾ ಚಕ್ರಕ್ಕೆ ರೂ.8 ಲಕ್ಷ ರೂ ವೆಚ್ಚಾಗುತ್ತದೆ. ಒಂದು ಪರೀಕ್ಷಾ ಚಕ್ರದಲ್ಲಿ 96 ಮಾದರಿಗಳನ್ನು ಪರೀಕ್ಷಿಸಬಹುದು. ಇಲಾಖೆಯು ಇದೀಗ ಒಂದು ಚಕ್ರದಲ್ಲಿ ಸುಮಾರು 50 ಮಾದರಿಗಳನ್ನು ಮಾತ್ರ ಪರೀಕ್ಷೆ ನಡೆಸುತ್ತಿದೆ. ಮೊದಲ ಪರೀಕ್ಷಾ ಚಕ್ರದ ವರದಿಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದು 10 ವಿಮಾನ ನಿಲ್ದಾಣದ ಪ್ರಯಾಣಿಕರ ವರದಿಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಬ್ಬ ಪ್ರಯಾಣಿಕನಲ್ಲಿ ಓಮಿಕ್ರಾನ್ ರೂಪಾಂತರಿ  ವೈರಸ್'ನಿಂದ ಬಂದಿರುವ ಹೊಸ ತಳಿ ಬಿಎಫ್.7.4 ಪತ್ತೆಯಾಗಿದೆ. ಇನ್ನು ಕೆಲವರಲ್ಲಿ ಎಕ್ಸ್'ಬಿಬಿ ಮತ್ತು ಬಿಎ.2.75 ವೈರಸ್ ಪತ್ತೆಯಾಗಿದೆ. ಎರಡನೇ ಸೆಟ್ ಮಾದರಿಗಳನ್ನು ಇನ್ನೂ ಪರೀಕ್ಷೆಗೆ ಕಳುಹಿಸಲಾಗಿಲ್ಲ. ಈ ವಾರ ಪರೀಕ್ಷೆಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಬಿಎಂಸಿಆರ್‌ಐ ಡೀನ್ ಡಾ ರವಿ ಕೆ ಅವರು ಮಾತನಾಡಿ, ಪರೀಕ್ಷೆ ನಡೆಸಲು ನಮ್ಮಸಲ್ಲಿ ಸಾಕಷ್ಟು ಸಂಪನ್ಮೂಲ ಹಾಗೂ ಮಾನವ ಶಕ್ತಿಯಿದೆ. ನಮ್ಮಲ್ಲಿ ಸಲಕರೆಗಳ ಕೊರತೆಯಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಉಪಕರಣಗಳನ್ನು ಖರೀದಿ ಮಾಡಲು ಚಿಂತನೆಗಳು ನಡೆದಿವೆ. ಇವುಗಳ ವೆಚ್ಚ ಭರಿಸಲು ಆಸ್ಪತ್ರೆ ಆರ್ಥಿಕವಾಗಿ ಸುಸಜ್ಜಿತವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಸರ್ಕಾರವೂ ಬೆಂಬಲ ನೀಡುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel