ಎನ್ಐಎ 
ರಾಜ್ಯ

ಶಿವಮೊಗ್ಗದಲ್ಲಿ ಐಎಸ್ಐಎಸ್ ಚಟುವಟಿಕೆ ಪ್ರಕರಣ: ಮಂಗಳೂರು ವಿದ್ಯಾರ್ಥಿ ಸೇರಿ ಇಬ್ಬರು ಎನ್ಐಎ ವಶಕ್ಕೆ

ಎನ್ಐಎ ಅಧಿಕಾರಿಗಳು ಜ.05 ರಂದು ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿ 6 ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದ್ದು ಪ್ರಕರಣದ ಸಂಬಂಧ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಜ.05 ರಂದು ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಸೇರಿ 6 ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದ್ದು ಪ್ರಕರಣದ ಸಂಬಂಧ ಓರ್ವ ವಿದ್ಯಾರ್ಥಿ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣ ಕಳೆದ ವರ್ಷ ಸೆ.19 ರಂದು ಶಿವಮೊಗ್ಗದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಭಾರತದಲ್ಲಿ, ನಿಷೇಧಿತ ಉಗ್ರ ಸಂಘಟನೆ ಐಎಸ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವುದು ಹಾಗೂ ದೇಶದ ಭದ್ರತೆ, ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುವ ಯೋಜನೆ, ಪಿತೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. ಬಂಧಿತ ವ್ಯಕ್ತಿಗಳನ್ನು ರೆಷಾನ್ ತಜುದ್ದೀನ್ ಶೇಖ್ (ಉಡುಪಿಯ ಬ್ರಹ್ಮಾವರದ ಶಾಂತಿನಗರದ ನಿವಾಸಿ ತಜುದ್ದೀನ್ ಶೇಖ್ ಪುತ್ರ)  ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಬಶೀರ್ ಬೇಗ್ ಎಂಬಾತನ ಪುತ್ರ ಹುಜೈರ್ ಫರ್ಹಾನ್ ಬೇಗ್ ಎಂದು ಗುರುತಿಸಲಾಗಿದೆ. 

ಎನ್ಐಎ ತನಿಖೆಯಲ್ಲಿ ಆರೋಪಿ ಮಾಜ್ ಮುನೀರ್ ಎಂಬಾತ ತನ್ನ ಸಹಪಾಠಿ ಹಾಗೂ ಆಪ್ತ ರೇಶಾನ್ ತಜುದ್ದೀನ್ ಎಂಬಾತನನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ರೇಶಾನ್ ತಜುದ್ದೀನ್ ಶೇಖ್, ಹುಜೈರ್ ಫರ್ಹಾನ್ ಬೇಗ್ ಐಎಸ್ಐಎಸ್ ಹ್ಯಾಂಡ್ಲರ್ ನಿಂದ ಕ್ರಿಪ್ಟೋ ವ್ಯಾಲೆಟ್ ಮೂಲಕ ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ತಮ್ಮ ಹಿಂಸಾತ್ಮಕ ದೀರ್ಘಾವಧಿಯ ಯೋಜನೆಗಳ ಭಾಗವಾಗಿ ಈ ವ್ಯಕ್ತಿಗಳು ಮದ್ಯದ ಅಂಗಡಿಗಳು, ಗೋಡೌನ್‌ಗಳು, ಟ್ರಾನ್ಸ್‌ಫಾರ್ಮರ್‌ಗಳಂತಹ ವಾಹನಗಳು ಮತ್ತು ಇತರ ಸಂಸ್ಥೆಗಳಿಗೆ ಬೆಂಕಿ ಹಚ್ಚುವುದು ಮತ್ತಿತರ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಶೋಧಕಾರ್ಯಾಚರಣೆ ನಡೆಸಿದಾಗ ಡಿಜಿಟಲ್ ಉಪಕರಣಗಳು ಹಾಗೂ ದೋಷಾರೋಪಣೆಗೆ ಪೂರಕವಾಗುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾಟಿ ಚಿಕನ್-ಇಡ್ಲಿ': ಇಂದಿನ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ರಹಸ್ಯವೇನು?

ಡಿಸಿಎಂ ನಿವಾಸಕ್ಕೆ ಬ್ರೇಕ್ ಫಾಸ್ಟ್ ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ- ಡಿಕೆ ಸೋದರರಿಂದ ಸ್ವಾಗತ-Video

ರಾಜ್ಯದಲ್ಲಿ ಮುಗಿಯದ ಕುರ್ಚಿ ಕದನ: CM-DCM ಬ್ರೇಕ್ ಫಾಸ್ಟ್ ಮೀಟಿಂಗ್ ನಡುವಲ್ಲೇ 'ಕೈ' ಶಾಸಕ ಸ್ಫೋಟಕ ಹೇಳಿಕೆ

ಸಿದ್ದರಾಮಯ್ಯಗೆ ನೆಚ್ಚಿನ 'ನಾಟಿ ಕೋಳಿ ಸಾರು' ಬಡಿಸಲಿರುವ ಡಿ ಕೆ ಶಿವಕುಮಾರ್: ತೀವ್ರ ಕುತೂಹಲ ಕೆರಳಿಸಿದ ಇಂದಿನ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್ !

'ಪುರುಷ ಸಲಿಂಗಿ'ಗಳಲ್ಲಿ ಹೆಚ್ಚಿನ ಏಡ್ಸ್ ರೋಗ: ಸಚಿವ ದಿನೇಶ್ ಗುಂಡೂರಾವ್ ಕಳವಳ!

SCROLL FOR NEXT