ಹಂಪಿ ಬಳಿ ರಕ್ಷಿಸಲ್ಪಟ್ಟ ಯುರೇಷಿಯನ್ ಗ್ರಿಫನ್ ವಲ್ಚರ್(ಫೋಟೋ ಕೃಪೆ-ಶಿವಶಂಕರ ಬಣಗಾರ್ 
ರಾಜ್ಯ

ಹಂಪಿ ಬಳಿ ಕಳೆದ ತಿಂಗಳು ರಕ್ಷಿಸಲ್ಪಟ್ಟಿದ್ದ ಯುರೇಷಿಯನ್ ಗ್ರಿಫನ್ ವಲ್ಚರ್ ಮರಳಿ ಗೂಡಿಗೆ

ಕಳೆದ ತಿಂಗಳು ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ಬಳಿಯ ರಾಣಿಪೇಟೆಯಲ್ಲಿ ಶಾಲಾ ಮಕ್ಕಳ ಕೈಗೆ ಅಪರೂಪದ ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಿಕ್ಕಿದ್ದವು.

ಹಂಪಿ: ಕಳೆದ ತಿಂಗಳು ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ಬಳಿಯ ರಾಣಿಪೇಟೆಯಲ್ಲಿ ಶಾಲಾ ಮಕ್ಕಳ ಕೈಗೆ ಅಪರೂಪದ ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಿಕ್ಕಿದ್ದವು.

ಅಸ್ವಸ್ಥ ಸ್ಥಿತಿಯಲ್ಲಿ ಅವರು ಶಾಲಾ ಮಕ್ಕಳ ಕಣ್ಣಿಗೆ ಬಿದ್ದಿದ್ದವು. ನಂತರ ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಅವರು ಮಕ್ಕಳ ಕೈಯಿಂದ ರಣಹದ್ದುಗಳನ್ನು ರಕ್ಷಿಸಿ ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯಕ್ಕೆ ನೀಡಿದ್ದರು. 

ಮೃಗಾಲಯದ ತಜ್ಞ ಪಶುವೈದ್ಯೆ ಡಾ ವಾಣಿ ಹಾಗೂ ಸಿಬ್ಬಂದಿಗಳ ತಂಡ ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಇದೀಗ ಗುಣಪಡಿಸಿ ಮತ್ತೆ ಪಂಜರದಿಂದ ಮುಕ್ತಗೊಳಿಸಿ ಕಾಡಿಗೆ ಬಿಟ್ಟಿದ್ದಾರೆ. ತಾಲ್ಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾರಿ ಬಿಟ್ಟಿದ್ದಾರೆ. 

ವನ್ಯಜೀವಿ ಸಂಶೋಧಕ ಡಾ ಸಮದ್ ಕೊಟ್ಟೂರು ಅವರು ಈ ಪಕ್ಷಿಯ ಗುರುತು ಪತ್ತೆಹಚ್ಚಿ ಇದು ಒಂದು ವರ್ಷ ವಯೋಮಾನದ ಯುರೋಪಿಯನ್ ಗ್ರಿಫನ್ ರಣಹದ್ದು ಎಂದು ಗುರುತಿಸಿದ್ದಾರೆ.

ರಣಹದ್ದಿನ ಕಾಲಿಗೆ ವಿಶೇಷ ಗುರುತಿಗೆ ನೀಲಿ ಬಣ್ಣದ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಸಿಯು ಎಂದು ಮುದ್ರಿಸಲಾಗಿದೆ. ಹಂಪಿಯ ಹತ್ತಿರ ಸಿಕ್ಕಿರುವುದು ಎಂದು ಮುಂದೆ ಇದನ್ನು ವಿಶೇಷವಾಗಿ ಸುಲಭವಾಗಿ ಗುರುತು ಹಿಡಿಯಬಹುದಾಗಿದೆ. 

ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಾಮಾನ್ಯವಾಗಿ ಭಾರತದ ಉತ್ತರ ಭಾಗ, ವಾಯುವ್ಯ ಪ್ರದೇಶದಲ್ಲಿ ಕಂಡುಬರುತ್ತವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT